ಪಾತರಗಿತ್ತಿ
ಹನುಮಂತ ಪಾಟೀಲ್
ಬಂತು ಪಾತರಗಿತ್ತಿ ಹೂಬನವ ಸುತ್ತಿ
ಗಿರಿ ಶಿಖರಗಳ ನೆತ್ತಿ ಹತ್ತಿ
ಕೊಳ್ಳ ಕಣಿವೆಗಳ ಸುತ್ತಿ ಮನಸೋ ಇಚ್ಛಿ
ಬಂದೈತಿ ಇತ್ತ ಮುಂದಿನ ಪಯಣವೆತ್ತ ?
ರೇಶಿಮೆಯ ನುಣುಪಿನ ನವಿರಾದ ರೆಕ್ಕಿ
ಬಣ್ಣ ಬಣ್ಣಗಳ ಹಚ್ಚಿ ಚುಚ್ಚಿ
ವಿವಿಧ ವರ್ಣ ಸಂಯೋಜನಗೆಳ ಭಿತ್ತಿ
ಚಿತ್ತ ಚಿತ್ತಾರದ ರಂಗುಗಳ ರೆಕ್ಕಿ
ಹೂವಿಂದ ಹೂವಿಗೆ ಹಾರುವ ಗಟ್ಟಿಗಿತ್ತಿ
ಚಂದುಳ್ಳಿ ಮನದ ಪಾತರಗಿತ್ತಿ
ಇಷ್ಟು ದಿನ ನೀನು ಎಲ್ಲಿದ್ದಿ ಸುಂದರಿ ?
ಇದ್ದಕಿದ್ದಂತೆ ಧರೆಯಲುದಿಸಿದ ಪರಿ !
ಹಾರುವೆಡೆಯಲ್ಲೆಲ್ಲ ಜಗದ ತುಂಬೆಲ್ಲ
ಚಿಲುಮೆಯುಕ್ಕಿಸುವ ಚೈತನ್ಯ ಜೀವಿ
ನೀನು ಸುತ್ತುವ ದಶ ದಿಕ್ಕುಗಳಲೆಲ್ಲ
ಜೀವನ ಸಂಕೇತವನೊಯ್ವ ಸಾಂಕೇತ ಜೀವಿ
ಚಣದ ನಶ್ವರ ಬದುಕು ನಿನ್ನದಾದರೂ
ಯುಗದ ಬಾಳೆಂಬಂತೆ ಬದುಕಿ
ಕಾಲನ ಕರೆಗೆ ಓಗೊಟ್ಟು ಕಾಣೆಯಾಗುವಾಕಿ
ಬದುಕಿನ ತುಂಬೆಲ್ಲ ಮೋಹ ತುಂಬಿ ಕೊಂಡಾಕಿ
ಹನುಮಂತ ಅನಂತ ಪಾಟೀಲ ರಿಗೆ ನಮಸ್ಕಾರ. ಕವಿತೆ ಚನ್ನಾಗಿದೆ, ಈ ಪಾತರಗಿತ್ತಿ ಒಂದು ರೀತಿಯಲ್ಲಿ ಬೇಂದ್ರೆ ಕಾಪಿ ರೈಟ್.
ಚಣದ ನಶ್ವರ ಬದುಕು ನಿನ್ನದಾದರೂ, ಯುಗದ ಬಾಳೆಂಬಂತೆ ಬದುಕಿ
ಕಾಲನ ಕರೆಗೆ ಓಗೊಟ್ಟು ಕಾಣೆಯಾಗುವಾಕಿಮ, ಬದುಕಿನ ತುಂಬೆಲ್ಲ ಮೋಹ ತುಂಬಿ ಕೊಂಡಾಕಿ…ತೂಕದ ಸಾಲುಗಳು. ಬದುಕಿನ ಅರ್ಥವಂತಿಕೆಯನ್ನು ಸಾರುವ ಸಂಕೇತಶೀಲ ಬದುಕು ಈ ಪಾತರಗಿತ್ತಿಯದು.
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು. ಅವದಿಯಲ್ಲಿನ ಎಲ್ಲರ ಎಲ್ಲ ಬರಹಗಳಿಗೆ ಓದುಗರ ಪ್ರತಿಕ್ರಿಯೆಗಳಿರಲಿ. ಓದುಗರ ಅಬಿವ್ಯಕ್ತಿಯೆ ಬರಹಗಾರರಿಗೆ ಸ್ಪೂರ್ತಿ.
ಪದ್ಯ ಚೆನ್ನಾಗಿದೆ.
NAVODAYADA RAMYATE HAGOO GEYATEYA ANUBHAVA.
uttama jeevanpreetiyinda kudida kavana..