ಗಡಿ ದಾಟಿ ಹರಡಿದ ಕತ್ತಲೆದೆ ಸೀಳಿ..

ಸರೋಜಿನಿ ಪಡಸಲಗಿ

**

ಮನದ ಕಿಟಕಿ ಇಷ್ಟಗಲ ತೆಗೆದು

ಅದ ಮೀರಿ ಕಣ್ಣರಳಿಸಿ ಅಷ್ಟಗಲ

 ಗಡಿದಾಟಿ ಹರಡಿದ ಕತ್ತಲೆದೆ ಸೀಳಿ

ತಡಕಿ ಸೋತ ಜೀವ ದಿಕ್ಕು ತಪ್ಪಿದರೂ

ಊಂ ಹೂಂ ಏನೂ ಗೊತ್ತಾಗಲೇ ಇಲ್ಲ

ಹೌದು ಎಲ್ಲಾ  ಅದಲು ಬದಲು ಗದ್ದಲ

ನೂರು ಕತೆ ಹೇಳುವ ನೆನಪು ಇಣುಕುವ ನೆರಿಗೆಗಳ

ನೆರವಿಯಲಿ ಮೌನ ಸಾಮ್ರಾಜ್ಯ 

ಯೋಚನೆಗಳ ಭಾರಕೆ ನಜ್ಜು ಗುಜ್ಜಾದರೂ

ಊಂ ಹೂಂ ಏನೂ ಗೊತ್ತಾಗಲೇ ಇಲ್ಲ 

ಗಾಬರಿ  ಗೊಂದಲದಲಿ ಅತ್ತಿತ್ತ ಹೊರಳಿ

ಧಡಬಡಿಸಿದರೆ ಅಲ್ಲೇನಿದೆ ಅಷ್ಟಾವಕ್ರ ನಗು

ಕೆಂಜುಗಣ್ಣ ತುಂಬ ಸತ್ತ ಕನಸುಗಳ ನೆರಳು 

 ಹುಚ್ಚೋ ಮರುಳೊ ತಿಳೀದೆ ಪರಚಿಕೊಂಡರೂ

ಊಂ ಹೂಂ ಏನೂ ಗೊತ್ತಾಗಲೇ ಇಲ್ಲ

ಅಸಹನೀಯ ಸ್ಥಿತಿ ಕಣ್ಬಾಯಿ ಬಿಡುತ ಕೇಳಿತು 

ಏನಾಗ್ತಿದೆ ತಿಳಿಯಾಗಿ ಅರ್ಥವಾಗೋದ್ಯಾವಾಗ

ಬಿಟ್ಟು ಬಿಡು ಆ ಹುಚ್ಚು ಯೋಚನೆ ಆಸೆ ಎಲ್ಲಾ

ಈ ಗೊತ್ತಾಗದ ಅರ್ಥವಾಗದ ಹೊರೆ ಹೊತ್ತು  

ಶೇಷಗಳ ಶೇಷವಾಗೋದಷ್ಟೆ ಮತ್ತೇನಿಲ್ಲ ವಿಶೇಷ 

‍ಲೇಖಕರು Admin MM

May 3, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Shrivatsa Desai

    ಚಂದನ್ನ ಕವಿತೆ. ಶೇಷಗಳನ್ನು ಎಲ್ಲ ಪೇರಿಸಿ ನೋಡಿದರೂ ಅಶೇಷವೇ . ಈ ಪ್ರತಿಕ್ರಿಯೆಯೂ ಸಹ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: