ಬೆಲ್ಲ ಮತ್ತು ಕಲ್ಲು…

ಶಶಿಕಲಾ ವಸ್ತ್ರದ

ಅದೊಂದು ದಿನ ಗೆಳತಿ ಅಂದಳು, ‘ಕಲ್ಲಾದ ಅಹಲ್ಯೆಯ
ಮೈಯ ನೇವರಿಸಿ ಜೀವಸೆಲೆಯೊಡೆಸಿ ಬದುಕನುದ್ಧರಿಸಿದನು, ಶ್ರೀ ರಾಮ, ಕರುಣಾಸಾಗರ, ಸದ್ಗುಣದಾಗರ, ಉಘೇ ಉಘೇ ಎಂದಿತು ಜನಸಾಗರ, ಜಗಕೆಲ್ಲಾ
ಹೆಮ್ಮೆಯೋ ಹೆಮ್ಮೆ,
ಆದರಿನ್ನೊಮ್ಮೆ, ಇದೇ ಮಹಾತುಮಾ, ಉಕ್ಕುವ ಜೀವಗಳನು ಹೊತ್ತ, ಗರ್ಭಸ್ಥೆ
ಮಂದಸ್ಮಿತೆ, ಜೀವನೋತ್ಸಾಹದಲಿ ವಿಜೃಂಭಿಸುವ ಸತಿ-ಸೀತೆಯನ್ನು ಕಾಡುಪಾಲಾಗಿಸಿ, ಕೈ ತೊಳೆದನೀ ಸೀತಾರಾಮ.
‘ಕರುಣಾಳು ರಾಘವನಲಿ ತಪ್ಪಿಲ್ಲ’ ಎಂದತ್ತಳು ಮಾತೆ ಸೀತೆ, ಅಲ್ಲವೇನೇ?
ಈ ರಾಮಣ್ಣರೇ ಹೀಗೆ ಕಣೇ,
ನಿಜಸತಿಗೆ ಕಲ್ಲಾಗುವ ಇವರು
ಪರಸತಿಗೆ ಮಾತ್ರ ಬೆಲ್ಲವಾಗುತ್ತಾರೆ. ಹೌದಲ್ಲವೇನೇ?’ ಎಂದಳು ಗೆಳತಿ ಮತ್ತೆ,
ಏನು ಹೇಳಲಿ ನಾನು? ಹೇಗೆ
ಹೇಳಲಿ ಹೇಳಿ?
ಎದುರಿಗೇ ಕುಳಿತಿದ್ದ ಗಂಡ!!


ನನಗೊಂದು ಮುಖ, ತನ್ನ ಕಛೇರಿ ಕನ್ಯೆಗೊಂದು ಮುಖ
ಹೊತ್ತ ಗಂಡ-ಭೇರುಂಡ!!!!
ನಾನೇನು ಹೇಳುವೆನೋ ಎಂದು, ನನ್ನೆಡೆಗೇ ನೋಡುತ್ತಾ,
ಪುಸಲಾವಣೆಯ ನಗೆನಕ್ಕಾ,
ಮಹಾಪಕ್ಕಾ!!!!!
ನನಗೋ ಎದೆ ಒಳಗೇ ಪುಕಪುಕಾ!!!!
ಹಸಿರೆಲೆಯೂ ಇಲ್ಲದ ಬಯಲು
ಸೀಮೆಯ ನನಗೆ, ಇವ
ಕಾಡಿಗಟ್ಟುವ ಭಯವೂ ಇಲ್ಲ
ನೋಡಿ? ಹೀಗಾಗಿ, ‘ನೂರಕ್ಕೆ ನೂರು ನಿನ್ನ ಮಾತು ನಿಜ ಕಣೇ’ ಎಂದೆ, ಅವನೆಡೆಗೆ
ನೋಡದೇ ಧೀರಳಾಗಿ!!!!!!!!!!

‍ಲೇಖಕರು Avadhi

October 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಣೆ

ಆಣೆ

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: