ಸುರೇಶ ಎಲ್ ರಾಜಮಾನೆ
ಅಮರರಾಗುವದು ಎಂದರೆ ಸಾವನ್ನು ಗೆಲ್ಲುವದಲ್ಲ
ಸಾಯುವುದೆಂದರೆ ಜೀವವನ್ನು ಕಳೆದುಕೊಳ್ಳುವದಲ್ಲ
ನಡೆಯಬೇಕು ಓಡಬೇಕು ಬೀಳಬೇಕು ಏಳಬೇಕು
ಆಡಿಸುವಾತ ಆಡಿಸಿದಂಗೆ ಆಡಲೇಬೇಕು ಬೇರೆ ದಾರಿಯಿಲ್ಲ
ನಗಬೇಕು ಅಳಬೇಕು ನಗಿಸಬೇಕು ತಲೆಬಾಗಿಸಬೇಕು
ಎಲ್ಲದಕ್ಕೂ ಬೆಲೆಯಿದೆ ಬೆಲೆಯಿಲ್ಲದಿರೆ ನೆಲೆಯೂರಲಾಗುವದಿಲ್ಲ
ಹತ್ತಬೇಕು ಇಳಿಯಬೇಕು ಸುತ್ತಬೇಕು ತಪ್ಪಿದ್ದಲ್ಲ
ತುತ್ತು ಕೂಳಿಗೆ ಕೂಲಿ ಹೊತ್ತು ಸತ್ತರೇನು ತಪ್ಪಿಲ್ಲ
ಹೊಲ ಮನೆ ಆಸ್ತಿ ಅಂತಸ್ತು ಇರುವಷ್ಟು ಹೊತ್ತು ಮಾತ್ರ ಗೊತ್ತಲ್ಲ
ತಿಳಿದಿರಲಿ, ಬಿದ್ದ ಗೋಡೆಯು ತಾನಾಗೆ ಎಂದೂ ಎದ್ದು ನಿಲ್ಲೊಲ್ಲ
ಗಾಳಿ ಮಳೆ ಚಳಿ ಬಿಸಿಲು ಎಲ್ಲವೂ ಸೃಷ್ಟಿಯದ್ದೇ ಸೃಷ್ಟಿ
ಬದುಕಿನ ದೃಷ್ಟಿ ದೋಷಪೂರಿತವಾದರೆ ದಿಕ್ಕು ತೋಚುವುದಿಲ್ಲ
ಸೂರ್ಯ ಚಂದ್ರ ಆಕಾಶ ನಕ್ಷತ್ರ ಹೊಗಳಿಕೆಗೆ ಮಾತ್ರ ಚಂದ
ಕಾಯಕದಿಂದಲೇ ನಾಯಕರಾಗುವದು ಅಷ್ಟು ಸುಲಭವಲ್ಲ
0 ಪ್ರತಿಕ್ರಿಯೆಗಳು