ಬೆಲೆಯಿಲ್ಲದಿರೆ ನೆಲೆಯಿಲ್ಲ..

ಸುರೇಶ ಎಲ್ ರಾಜಮಾನೆ

ಅಮರರಾಗುವದು ಎಂದರೆ ಸಾವನ್ನು ಗೆಲ್ಲುವದಲ್ಲ
ಸಾಯುವುದೆಂದರೆ ಜೀವವನ್ನು ಕಳೆದುಕೊಳ್ಳುವದಲ್ಲ

ನಡೆಯಬೇಕು ಓಡಬೇಕು ಬೀಳಬೇಕು ಏಳಬೇಕು
ಆಡಿಸುವಾತ ಆಡಿಸಿದಂಗೆ ಆಡಲೇಬೇಕು ಬೇರೆ ದಾರಿಯಿಲ್ಲ

ನಗಬೇಕು ಅಳಬೇಕು ನಗಿಸಬೇಕು ತಲೆಬಾಗಿಸಬೇಕು
ಎಲ್ಲದಕ್ಕೂ ಬೆಲೆಯಿದೆ ಬೆಲೆಯಿಲ್ಲದಿರೆ ನೆಲೆಯೂರಲಾಗುವದಿಲ್ಲ

ಹತ್ತಬೇಕು ಇಳಿಯಬೇಕು ಸುತ್ತಬೇಕು ತಪ್ಪಿದ್ದಲ್ಲ
ತುತ್ತು ಕೂಳಿಗೆ ಕೂಲಿ ಹೊತ್ತು ಸತ್ತರೇನು ತಪ್ಪಿಲ್ಲ

ಹೊಲ ಮನೆ ಆಸ್ತಿ ಅಂತಸ್ತು ಇರುವಷ್ಟು ಹೊತ್ತು ಮಾತ್ರ ಗೊತ್ತಲ್ಲ
ತಿಳಿದಿರಲಿ, ಬಿದ್ದ ಗೋಡೆಯು ತಾನಾಗೆ ಎಂದೂ ಎದ್ದು ನಿಲ್ಲೊಲ್ಲ

ಗಾಳಿ ಮಳೆ ಚಳಿ ಬಿಸಿಲು ಎಲ್ಲವೂ ಸೃಷ್ಟಿಯದ್ದೇ ಸೃಷ್ಟಿ
ಬದುಕಿನ ದೃಷ್ಟಿ ದೋಷಪೂರಿತವಾದರೆ ದಿಕ್ಕು ತೋಚುವುದಿಲ್ಲ

ಸೂರ್ಯ ಚಂದ್ರ ಆಕಾಶ ನಕ್ಷತ್ರ ಹೊಗಳಿಕೆಗೆ ಮಾತ್ರ ಚಂದ
ಕಾಯಕದಿಂದಲೇ ನಾಯಕರಾಗುವದು ಅಷ್ಟು ಸುಲಭವಲ್ಲ

‍ಲೇಖಕರು Admin

September 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: