ಬಿದಲೋಟಿ ರಂಗನಾಥ್ ಕವಿತೆ- ಕೊನೆಯಿಲ್ಲದ ಅಜ್ಜಿಯ ಹಾದಿ…

ಬಿದಲೋಟಿ ರಂಗನಾಥ್

ಅಜ್ಜಿ ಬೀದಿಗೆ ಬಿದ್ದಿದ್ದಾಳೆ
ಅವಳು ತಿರುಗಿದ ರೈಲ್ವೆ ನಿಲ್ದಾಣ
ಬಸ್ ನಿಲ್ಧಾಣ
ನಡೆದ ಪುಟ್ಬಾತುಗಳ ಮೇಲೆ
ಅವಳ ನಿಟ್ಟುಸಿರು ಹೆಪ್ಪುಗಟ್ಟಿದೆ

ಎಲ್ಲಿ ಹೋದರಲ್ಲಿ
ಅವರಿರವರು ಕೊಡುವ ಬಿಸ್ಕೇಟು ಬಾಳೆ ಹಣ್ಣು
ಪುಡಿಕಾಸು ತಿಂದು ಮಿಗಿಲಿದ ಹಿಡಿ ಅನ್ನ
ಮಡಿಲು ತುಂಬಿಕೊಂಡಿದ್ದಾಳೆ
ಯಾರು ಕೇಳಿದರು ಬಿಲ್ಕುಲ್ ಕೊಡುವುದಿಲ್ಲ
ಅವಳ ಬ್ರಾಂತು ಅದು ತನ್ನ ಮೊಮ್ಮಕ್ಕಳಿಗೆ ಮೀಸಲು

ಸುಕ್ಕುಗಟ್ಟಿದ ಮುಖ ಮೈ
ತೊಗಲು ಹೊತ್ತ ಜೀವ
ನೂರು ವರುಷದ ಆಸುಪಾಸಿನಲ್ಲಿದೆ
ಕಣ್ಣು ಬದುಕಿನ ಅನುಭವ ಹೊತ್ತು ನಿಂತಿದೆ
ಅದು ಊರುಗೋಲು ಇಲ್ಲದೆ ನಡೆಯುತ್ತಿದೆ

ಮಾಗಿದ ಮುಖದಲಿ ದಟೈಸಿದ
ಮುಗ್ಧ ಮಗುವಿನ ನಗು
ನನ್ನವರು ಯಾರು ?
ನನ್ನವರಲ್ಲದವರು ಯಾರು ?
ಗೊತ್ತಿಲ್ಲದ ಅಜ್ಜಿ
ಎಲ್ಲರಲ್ಲೂ ಮಗ ಮೊಮ್ಮಕ್ಕಳನ್ನು ಕಾಣುತ್ತಾಳೆ ಬೊಗಸೆ ತುಂಬಿದ ಕೆನ್ನೆಗೆ ಮುತ್ತಿಡುತ್ತಾಳೆ

ನಿದ್ದೆ ಬರದ ಆ ಅಜ್ಜಿ
ರಾತ್ರಿ ಅಲ್ಲೆಲ್ಲೋ ಬೀದಿಯಲಿ ಕೂತು
ನಕ್ಷತ್ರಗಳನ್ನು ಎಣಿಸುತ್ತಾ
ಒಂದೊಂದೆ ಬಿಡಿಸಿ
ಕಣ್ಣಿಗೆ ತುಂಬಿಕೊಂಡು ನಡೆಯುತ್ತಾಳೆ
ಕೊನೆಯಿಲ್ಲದ ಅವಳ ದಾರಿ ತೆರೆದುಕೊಳ್ಳುತ್ತಲೇ ಇದೆ..

ಮಡಿಲು ತುಂಬಿದ ಹಿಡಿ ಅನ್ನ
ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ
ತನ್ನ ತಾನೇ ಹೊರಲಾರದ ಅಜ್ಜಿ
ಮಡಿಲು ತುಂಬಿದ ತೂಕವ ಹೊರುತ್ತಿದೆ

ಅಲ್ಲೆಲ್ಲೋ ಸನಿಹದಲ್ಲಿ
ಸ್ಮಶಾನದ ಸಮಾಧಿಯೊಂದರ
ತಲೆಯಕಡೆ ಇಟ್ಟ ಕಲ್ಲು
ನಗುವ ಸದ್ದು ಕೇಳುತ್ತಿದೆ !
ಅಜ್ಜಿ ನಡೆಯುತ್ತಲೇ ಇದ್ದಾಳೆ.

‍ಲೇಖಕರು Admin

October 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: