ಬಸವನಗೌಡ ಹೆಬ್ಬಳಗೆರೆ ಕವಿತೆ- ಯಾರಿಗೆ ತಾನೇ ಹೇಳುವುದು ನಾವು?

ಬಸವನಗೌಡ ಹೆಬ್ಬಳಗೆರೆ

ಕೇಳಿಸಿದರೂ ಕೇಳಿಸದಂತೆ
ಎಚ್ಚರವಿದ್ದರೂ ಗಾಢ ನಿದ್ದೆಯಲ್ಲಿದ್ದಂತೆ
ನಟಿಸಬಲ್ಲ ಚಾಣಾಕ್ಷರಿರುವಾಗ
ಯಾರಿಗೆ ತಾನೇ ಹೇಳುವುದು ನಾವು?

ಮಾತಿನಲ್ಲೇ ಮಹಲು ಕಟ್ಟುತ್ತ
ಮಹಲುಗಳ ಮೇಲೆ ಮಹಲು
ಏರಿಸುತಿರುವ ಕಿರಾತಕರಿರುವಾಗ
ಯಾರಿಗೆ ತಾನೇ ಹೇಳುವುದು ನಾವು?

ಗೋಸುಂಬಿಯನ್ನ
ಮೀರಿಸುವಂತಹ ಬಣ್ಣ ಬದಲಿಸೋ
ವಂಚಕರಿರುವಾಗ
ಯಾರಿಗೆ ತಾ‌ನೇ ಹೇಳುವುದು ನಾವು?

ನಮ್ಮ ಕಷ್ಟವನು
ಲಾಭದ ಸರಕನು ಮಾಡಿಕೊಳ್ಳುವ
ಲಂಪಟರಿರುವಾಗ
ಯಾರಿಗೆ ತಾನೇ ಹೇಳಿಕೊಳ್ಳುವುದು ನಾವು?

ಗಾಳಿಯ ಬೀಸುವಿಕೆಗೆ ಸಿಕ್ಕು
ಜೊಳ್ಳು ಕಾಳಿನಂತೆ ಹಾರಿ ಹೋಗುವಂತಿರುವ
ಜನರ ಮೌಲ್ಯಗಳು
ಧನದಾಹಕೆ ಹಾರುತಿರುವಾಗ
ಯಾರಿಗೆ ತಾನೇ ಹೇಳುವುದು ನಾವು?

ಒಬ್ಬನ ಸಮಾಧಿಯ ಮೇಲೆ
ಮತ್ತೊಬ್ಬನು ಮಹಲು ಕಟ್ಟುತಿರುವಾಗ
ಯಾರಿಗೆ ತಾನೇ ದೂರುವುದು ನಾವು?

‘ತಾಮ್ರದ ಬಿಲ್ಲೆ (ಕಾಸು)
ತಾಯಿ ಮಗನ ಸಂಬಂಧ ಕೆಡಿಸುತ್ತೆ’
ಎಂಬ ಗಾದೆ ಮಾತು
ಸತ್ಯವಾಗುತ್ತಿರುವ ಕಾಲದಲ್ಲಿ
ಯಾರಿಗೆ ತಾನೇ ದೂರುವುದು ನಾವು??!!

ದೂರುವುದು ದೂರವಾಗಲಿ
ಮನಸು ಹಗುರವಾಗಲಿ
ಅಳುವವನು ಹೆಳವನೆನಿಸುವನಷ್ಟೇ!

ಆಳುವವರಾಗೋಣ ನಮ್ಮನು ನಾವೇ!
ನಮ್ಮ ಕಷ್ಟವನು ಧೈರ್ಯದಲಿ
ಎದುರಿಸುತ
ನಮಗೆ ನಾವೇ ಸಮಾಧಾನ
ಮಾಡಿಕೊಳ್ಳೋಣ…

‍ಲೇಖಕರು Admin

November 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: