ಬದಲಾಗಿ ಏನೂ ಬಯಸಲಿಲ್ಲ

ಸಿದ್ದುಮೂರ್ತಿ

ನೆಲದ ಮೇಲೆ ಬೀಜವೊಂದು
ಬೀಳಲು ಸಾಕು
ಚಿಗುರಿ ಗಿಡವಾಗಿ ಮರವಾದೆ
ದಣಿದವರಿಗೆ, ನೆರಳಾದೆ
ಬದಲಾಗಿ ಏನು ಬಯಸದೇ..!

ಹೀಚಾಗಿ ಕಾಯಾಗಿ
ಹಣ್ಣಾದೆ., ತಿನ್ನಲದುವೇ
ಸಿಹಿಯಾದೆ..
ಬದಲಾಗಿ ಏನು ಬಯಸದೇ..!

ಹಸಿರುಟ್ಟು ಉಸಿರಾದೆ
ಜೀವಕಣದ ಚೈತನ್ಯ
ನಿನ್ನೆದೆಯ ಬಡಿತದಿ
ನಾನೊಂದಾದೆ
ಬದಲಾಗಿ ಏನು ಬಯಸದೇ..!

ಮಳೆ ಬಿಸಿಲಿಗೆ ಮೈಯೊಡ್ಡಿ
ಸಿಡಿಲಿಗೆ ತಲೆಯೊಡ್ಡಿ
ಉಕ್ಕುವ ಪ್ರವಾಹಗಳ ತಡೆದು
ಕೊಚ್ಚಿ ಹೋಗುವ ಮಣ್ಣ ಹಿಡಿದು
ನೆಲದ ಸಾರತೆಯ ಉಳಿಸಿದೆ
ಬದಲಾಗಿ ಏನು ಬಯಸದೇ..!

ಕಾಲ ಕಾಲದ ಮಳೆಗೆ
ಇಂಬಾದೆ..ನಂಬಿಕೆಯ
ನೆಲೆಯೊಳಗೆ ನಿನ್ನದೇ ಸುಂದರ
ಬದುಕಿನ ಹಂದರಕೆ
ಹಚ್ಚ ಹಸಿರಾದೆ
ಬದಲಾಗಿ ಏನು ಬಯಸದೇ..!

ಬಯಸಿ ಬಯಸಿ
ಬದಲಾದುದು ನೀನೊಬ್ಬನೆ
ಸಿಗುವುದೆಲ್ಲ ತನಗಿರಲೆಂದು
ಬದುಕಲು ಬಿಡದವನಂತೆ
ಹುಂಬತನದ ಹಂಬಲದಿ..!!,

ತನ್ನದೇ ಹಿತಕ್ಕೆ
ನಡೆದ ತಾಲೀಮು,ಹಿಂದೆ
ನಮ್ಮದೇ ನೋವ ನೆರಳುಗಳು
ಎಳೆ ಎಳೆಯಾಗಿ ಹೆಣೆದ ಜಾಲದಿ
ನಾನು ಬಲಿಯಾಗುತ್ತಿರುವೆ..!!!

‍ಲೇಖಕರು Avadhi

June 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: