ಬದರಿನಾಥ ಪಳವಳ್ಳಿ ಹೊಸ ಕವಿತೆ- ಮುದಿ ಚಪಲ ಚಿತ್ತ…

ಬದರಿನಾಥ ಪಳವಳ್ಳಿ

ಯಾರನೋ ಏತಕೋ ಹುಡುಕು
ಮಾದಕ ಕಂಗಳು ಸವರಿದೊಡನೆ
ತುಕ್ಕು ಗಟ್ಟಿದ ತಂತಿಗಳಲೂ ಕಂಪನ,
ಗಸಿ ಬೂದಿ ಇಜ್ಜಲಲಿ ತಿಕ್ಕಿ ತಿಕ್ಕಿಯೆ
ಫಳ ಫಳಸಿ ಬಿಡುವ ಅಕಾಲ ಕೆರೆತ

ಸಹಸ್ರ ಪಾಕಗಳ ತಳವಿಡಿಸಿದ
ಗರಿಮೆ ಹೊತ್ತ ಹಳೆಯ ಬಾಣಲಿ
ಅಂಡು ಸುಡಿಸಿಕೊಂಡು ಕರಕಲು,
ಒಡಲ ಪೂರ ಅರೆಬರೆ ತೊಳೆದ
ಪುರಾತನ ಪಾಪ ಕರ್ಮಗಳ ಜಿಡ್ಡು

ಚಾಲ್ತಿಯಲ್ಲಿಡಲು ಯವ್ವನಾಸಕ್ತಿ
ಇಲ್ಲದುತ್ಸಾಹ ಆರೋಪಿಸಿಕೊಂಡು
ಎರವಲು ಹಸಿರೆಲೆಗಳ ಮೈ ಹೊದ್ದು,
ಬೇಡಿಕೆ ಅಪಪೋಲಿ ಆಸೆಗೆ ಬಿದ್ದು
ಬರಡು ಬೋರೊಳೂ ಜಲಪೂರ್ಣ

ಕಾಲ ಸರಿದಂತೆ ಕಾಲವಾಗಿ ಹೋದ
ವ್ಯರ್ಥ ಊದಿಗೆ ಕೆಂಡವಾಗದ ಕಿಡಿ
ಒಲೆಯಲೇ ಅಟಮಟಿಸಿ ಆರಿಹೋಗಿ,
ಗತ ಕಾಲದ ಜ್ವಾಲಾಮುಖಿ ಉಗುಳು
ಈಗ ಬರಿಯ ತೊಟ್ಟಿಕ್ಕು ಲಾಲಾರಸ!

‍ಲೇಖಕರು Admin

December 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: