ಬಂದನಶ್ವತ್ಥಾಮ..

ಅಪೂರ್ವ ಜ್ಞಾನ್

ತಿಳಿ ಸಂಜೆಯ ದ್ಯುತಿ ಕದನ
ಸೂರ್ಯನೆದೆಯೇ ರಕ್ತದ ಬನ
ಹೆಜ್ಜೆ ಹೆಜ್ಜೆಯಲಿ ರಕ್ತ ಚರಿತ್ರೆಯ ಹೊತ್ತು
ಕೊನೆಗೂ ಹಸ್ತಿನಾವತಿಗೆ ಬಂದನಶ್ವತ್ಥಾಮ

ಬೀದಿ ದೀಪಗಳ ಅಸ್ಥಿರ ಬೆಳಕಲಿ
ಯುದ್ಧ ಭೀತಿಗಳ ಅತಿ ಜ್ವರ ಚಳಿಯಲಿ
ಜೀವಕೆ ಸ್ವಾರ್ಥ, ಸಾವಿನ ಬಳುವಳಿ
ಪುರದ ಜನರ ಕನವರಿಕೆಗೂ ಹೆದರುತ
ಶಿಶು ಹಸುಳೆಗಳೆಳೆಯಳುವಿಗೂ ಬೇದರುತ
ಕೊನೆಗೂ ಹಸ್ತಿನಾವತಿಗೆ ಬಂದನಶ್ವತ್ಥಾಮ

ಬದುಕಲೊಲ್ಲದ ಜೀವಕೆ ಅಮರತ್ವದ ಶಾಪ
ಗುರುಪುತ್ರ ದ್ವಿಜ ವೀರನಿಗೂ ಶಿಶು ಹತ್ಯಾ ದೋಷ
ಪುರಸುತರುರಿವಕ್ಷಿಯಲಿ, ಅಸ್ಪೃಶ್ಯ ಕೃಪ
ವಿಧವೆಗಳುದರಚಿತೆಯೂ ಸುಡಲೊಲ್ಲದ ಪಾಪ
ಕೊನೆಗೂ ಹಸ್ತಿನಾವತಿಗೆ ಬಂದನಶ್ವತ್ಥಾಮ

ಶಾಮನ ಧರ್ಮ ಕಾಳಗದೊಳು ಅಧರ್ಮದ ಕಡು ಛಾಯೆ
ಅಶ್ವಗಜಾದಿಮನುಸುತರ ಶವಗಳಿಗೆ ವ್ಯಾಸನ ಕಾವ್ಯದ ಮಾಯೆ
ಚಿತ್ವಿಕಲ್ಪಿತ ಗುರುಸುತನ ಪಾಪಗಳಿಗೆಲ್ಲಿ ಶಾಸ್ತ್ರಗಳಸ್ಮಿತೆ
ಹೆಜ್ಜೆ ಹೆಜ್ಜೆಗೂ ರಕ್ತ ಚರಿತೆಯ ಹೊತ್ತು
ಕೊನೆಗೂ ಹಸ್ತಿನಾವತಿಗೆ ಬಂದನಶ್ವತ್ಥಾಮ

‍ಲೇಖಕರು Admin

August 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: