ರಾಯಚೂರಿನ ಮಸ್ಕಿ ಮೂಲದ ಬಂಡಾರ ಪ್ರಕಾಶನ ಪುಸ್ತಕ ಮಳಿಗೆಗಳ ಪೈಕಿ ತನ್ನದೇ ಗುರುತು ಮೂಡಿಸಿದೆ.
ತನ್ನ ವಿಶಿಷ್ಟ ಪುಸ್ತಕ ಸಂಗ್ರಹದಿಂದಾಗಿಯೇ ಬಂಡಾರ ನಾಡಿನ ಎಲ್ಲೆಡೆ ಪರಿಚಯವಾಗಿದೆ. ಇನ್ನೊಂದು ಮಳಿಗೆಯಲ್ಲಿ ಈ ಕೃತಿ ಸಿಗುವುದಿಲ್ಲ ಎನ್ನುವಂತಹ, ಸಂಶೋಧಕರಿಗೆ ರಸದೂಟವೆನಿಸುವ ಪುಸ್ತಕಗಳು ಬಂಡಾರದ ಯಶಸ್ಸಿನ ಗುಟ್ಟು.
ಪರಶುರಾಮ ಕೋಡಗಂಟಿ ಅವರ ಕಣ್ಗಾವಲಿನ ಬಂಡಾರ ಪ್ರಕಾಶನದ ಜೊತೆ ‘ಅವಧಿ’ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.
ಪುಸ್ತಕ ಮಾರಾಟ ಯಾಕೆ ಪ್ರಿಯ ?
ಒಳ್ಳೆ ವಿಷಯಗಳನ್ನ ಸರಳವಾಗಿ ಜನಗಳಿಗೆ ಮುಟ್ಟಿಸೋದು ಪುಸ್ತಕ. ಯಾವುದೋ ಒಂದು ಘಟನೆಯನ್ನ ಮಾತಿನಲ್ಲಿ ಬದಲಾಯಿಸಿ ಹೇಳಬಹುದು ಆದರೆ ಪುಸ್ತಕ ಇದ್ದದ್ದನ್ನ ಇದ್ದಹಾಗೆ ಹೇಳುತ್ತೆ.
‘ಬಂಡಾರ’ ಅನ್ನೋ ಹೆಸರು ಯಾಕೆ ?
ನಾವು ಎಲ್ಲಮ್ಮನ ಭಕ್ತರು ಹೀಗಾಗಿ ಬಂಡಾರ ಅನ್ನೋ ಹೆಸರನ್ನ ಇಟ್ಟಿದ್ದು.
ನಿಮ್ಮದು ಕಂಪ್ಲೀಟ್ ಡಿಫ್ರೆಂಟ್ ಕಲೆಕ್ಷನ್ ಏನಿದರ ಗುಟ್ಟು ?
ಓದುಗರಿಗೆ ಓದಲೇ ಬೇಕಾದ ಪುಸ್ತಕಗಳನ್ನು ಮುಟ್ಟಿಸಬೇಕು ಅಂತ.
ನಿಮ್ಮ ಪ್ರಕಾಶನದ್ದು ಹೊಸ ಸ್ಟೈಲ್ ಏನದು ?
ಎಲ್ಲ ಪ್ರಕಾಶಕರು ಅಥವಾ ಪುಸ್ತಕ ಮಾರಾಟಗಾರರು ಮೊದಲು ದುಡ್ಡು ಪಡೆದು ಪುಸ್ತಕ ನೀಡುತ್ತಾರೆ. ಆದರೆ ನಾವು ಮೊದಲು ಪುಸ್ತಕ ಅಂಚೆ ಮೂಲಕ ನೀಡಿ ನಂತರ ದುಡ್ಡು ಪಡೆಯುತ್ತೇವೆ.
ಪ್ರಕಾಶನ ಪುಸ್ತಕ ಮಳಿಗೆ ಮುಂದೆ ಏನ್ ಮಾಡುತ್ತೆ ?
ಏನು ಇಲ್ಲ. ಇದೇ ರೀತಿ ಪುಸ್ತಕ ಮಾರಾಟವನ್ನು ಮುಂದುವರಿಸುತ್ತೆ.
0 ಪ್ರತಿಕ್ರಿಯೆಗಳು