ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರೊ ಬಿ ಎ ವಿವೇಕ ರೈ ಅವರಿಗೆ ಮಣಿಪಾಲ ವಿಶ್ವವಿದ್ಯಾಲಯ, ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್ ನೀಡುವ ಪ್ರಶಸ್ತಿ ಸ್ವೀಕರಿಸಿದರು.
ಮಣಿಪಾಲದಲ್ಲಿ ಜರುಗಿದ ಆಕರ್ಷಕ ಸಮಾರಂಭದಲ್ಲಿ ಮಣಿಪಾಲ ವಿ ವಿ ಯ ಸಹಕುಲಾಧಿಪತಿ ಡಾ ಎಚ್ ಎಸ್ ಬಲ್ಲಾಳ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಮಣಿಪಾಲದ ವ್ಯಾಲಿ ವ್ಯೂ ಹೋಟೆಲ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರೊ ವಿವೇಕ ರೈ ಕುರಿತು ಮಾಧ್ಯಮ ವಿಭಾಗ ರೂಪಿಸಿದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
0 ಪ್ರತಿಕ್ರಿಯೆಗಳು