ಈ ವರ್ಷದ ಹಂಸ ಕಥಾ ಪುರಸ್ಕಾರಕ್ಕೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರಾದ ಆನಂದ ಕುಂಚನೂರ ಅವರ ‘ನಿರೂಪ’ ಕಥಾ ಸಂಕಲನವು ಆಯ್ಕೆಯಾಗಿದೆ
ಮಲ್ಲಮ್ಮ ಜೊoಡಿ ಅವರ ‘ದಿಡುಗು’ ಸಂಕಲನವು ತೀರ್ಫುಗಾರರ ವಿಶೇಷ ಮೆಚ್ಚುಗೆ ಪಡೆದ ಕೃತಿಯಾಗಿ ಆಯ್ಕೆಯಾಗಿದೆ.
2025 ನೇ ಸಾಲಿನ ಪ್ರಶಸ್ತಿಗಾಗಿ ಒಟ್ಟು 28 ಕೃತಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಟಾಪ್ ಹತ್ತು ಕತೆಗಳನ್ನು ಕತೆಗಾರ ಲಿಂಗರಾಜ ಸೊಟ್ಟಪ್ಪನವರ ಆಯ್ಕೆ ಮಾಡಿದ್ದರು.
ಹಿರಿಯ ಕತೆಗಾರರಾದ ಕಲ್ಲೇಶ್ ಕುಂಬಾರ ಅವರು ತೀರ್ಫುಗಾರರಾಗಿದ್ದರು.
ಆಗಷ್ಟ ತಿಂಗಳಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಹಂಸ ಕಥಾ ಪುರಸ್ಕಾರ ಸಮಿತಿಯ ಅಧ್ಯಕ್ಷರಾದ ಬಸವರಾಜ ಜಾಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






0 Comments