ಪ್ರೀತಿಯ ಜಿ ಕೆ ಆರ್ ಸಾರ್..

ಎದೆಯೊಳಗೆ ಉಳಿದ ಮಾತು

ಬಿದಲೋಟಿ ರಂಗನಾಥ್ 

ಪ್ರೀತಿಯ ಜಿ ಕೆ ಆರ್ ಸಾರ್
ನಿಮ್ಮ ಜೊತೆ ಮಾತಾಡಬೇಕೆಂದಿದ್ದೆ
ಬಯಲಾಗಬೇಕೆದ್ದ ಮಾತು
ಎದೆಯೊಳಗೆ ಉಳಿಯಿತು

ವಾಟ್ಸಪ್ನಲ್ಲಿ ನಾನು ಹಾಕಿದ ನಮಸ್ಕಾರಕ್ಕೆ
ಪ್ರತಿ ನಮಸ್ಕಾರ ಹಾಕಿ
ಸದ್ದಿಲ್ಲದೆ ಎದ್ದೊದಿರಿ
ಕಾವ್ಯ ಲೋಕದ ತಾರೆಯೊಂದು ಉದುರಿದ
ಮೋಡದಲಿ ಕತ್ತಲು ಕಡುಗತ್ತಲು..

ಕಾವ್ಯ ನಮಸ್ಕಾರದಲ್ಲಿನ
ನಿಮ್ಮ ಕವನ ಓದುತ ಇರುವಾಗಲೇ
ನಿಮ್ಮ ಸಾವಿನ ಸುದ್ದಿ ಬರಬೇಕೆ?
ಎಂತಹ ನಿಷ್ಕರುಣಿ ವಿಧಿ

ಮೆದುಳೊಳಗೆ ಮಗುವಾಗಿ
ಎದೆಯೊಳಗೆ ಬೆಳೆದು ಉಳಿದ ನಿಮ್ಮ ಕವಿತೆಗಳ ಸಾಲುಗಳು ನಿದ್ದೆಗೆಡಿಸಿವೆ
ಎಷ್ಟೊಂದು ಅರ್ಥವಿನಿಮಯ ನಿಮ್ಮ ಕವಿತೆಗಳಲ್ಲಿ
ನಿಟ್ಟುಸಿರ ಜಾಡಿನಲಿ ಹೆಜ್ಜೆಯೂರಿ
ಸೇರುವ ತಾವಿನ ಕಡೆ ಮುಖಮಾಡಿ
ಕನ್ನಡಿ ಬೇಕಿಲ್ಲದ ಶಶಿಕರನ ಎದೆಯ ಮೇಲಾಡುತ್ತಿವೆ


ಹೆಸರಿಲ್ಲದ ಊರು
ದಿಕ್ಕಿಲ್ಲದ ದಾರಿ
ಮನೆ ಮಡದಿ ಮಕ್ಕಳಿಲ್ಲದ
ಕಾವ್ಯದ ಕನಸಿಲ್ಲದ ಆ ನಿಶ್ಚಿಂತೆಯ ನಿದ್ದೆ
ನಿಜಕ್ಕೂ ಬೇಡವಾಗಿತ್ತು
ಆಗಂತ ನೀವೆ ಬಯಸಿದ ಚಿರನಿದ್ರೆಯೂ ಅಲ್ಲ

ಅಲ್ಲೇ
ಹಾಗೆ ಇದೆ
ನಿಮ್ಮ ಮುಖದ ಗೆರೆ ಜಾಡುಗಳಲ್ಲಿ
ಕಡು ಕಾವ್ಯ ಮೋಹಿಯ ಕಳೆ
ಆ ಶಾಂತ ನಿದ್ರೆಯಲ್ಲೂ !

ಮುರುಟಿ ಮಣ್ಣಲ್ಲಿ ಮಣ್ಣಾಗಿ ಹೋದವು
ಕೊನರಲು ಇಣುಕುತ್ತಿದ್ದ ಕೆಲವು
ಕಾವ್ಯದ ಸಾಲುಗಳು
ಜೀವಂತ ಉಳಿದು ಬೆಳಕು ಚಲ್ಲುತ್ತಿವೆ
ನೀವೆ ಬರೆದ ಕವನದ ಸಾಲುಗಳು

ಕಾವ್ಯದ ಸಾಲು ಸಾಲಿನ
ಖಾಲಿ ಜಾಗದಲಿ ನಿಮ್ಮ ಉಸಿರಿದೆ
ನೀವಿಲ್ಲ !
ನೀವೆ ಚಲಿಸಿದ ದಾರಿಯ ಮೇಲೆ
ಕರುಣೆ ಪ್ರೀತಿ ಮಮತೆ ಉಸಿರಾಡುತ್ತಿವೆ

ಏನೆ ಆದರೂ
ನಾನು ನಿಮ್ಮೊಂದಿಗೆ ಮಾತಾಡುವುದಿತ್ತು
ಎದೆಯೊಳಗೇ ಉಳಿದ ಮಾತಿಗೆ
ನಾನೇನು ಜವಾಬು ಕೊಡಲಿ.

‍ಲೇಖಕರು avadhi

October 10, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: