'ಪ್ರೀತಿಗಿಂತ ಪ್ರಮಾದಗಳೇ ಮಿಗಿಲೇನು?' – ಟಿ ಎಸ್ ಗೊರವರ ಕವಿತೆ

– ಟಿ ಎಸ್ ಗೊರವರ

ಪುಡಿಯಾಗಲಿ ನಮ್ಮಿಬ್ಬರ ನಡುವಿನ ಅಹಮ್ಮಿನ ಗೋಡೆ
ನನ್ನದೋ ನಿನ್ನದೋ ಗೊತ್ತಿಲ್ಲ ;
ಪ್ರಮಾದಗಳು ಘಟಿಸುವವು ದಿನ ಬೆಳಗಾದರೆ
ಪ್ರೀತಿಗಿಂತ ಪ್ರಮಾದಗಳೇ ಮಿಗಿಲೇನು?
 
ಈ ಮೌನ ಹಿತವಾಗಿತ್ತು ಮೊದ ಮೊದಲು
ಮೌನದೊಳಗೂ ಜಿನಗುತ್ತಿತ್ತು ಭರಪೂರ ಪ್ರೀತಿ
ನೀನು ಮಾತು ಬಿಟ್ಟ ಮರುದಿನದ ಮೌನ
ಕಡು ಬೇಸಿಗೆಯ ದಿನ ;
ಯಾತನೆಯಾಗಿ ತೊಯ್ಯುತಿವೆ ಕಣ್ಣುಗಳು
 
ಬೆಳೆಯೊಳಗೆ ಕಳೆಯೂ ಬೆಳೆಯುವುದು
ಮೊಸರೊಳಗೂ ಬೀಳುವುದು ಒಮ್ಮೊಮ್ಮೆ ಹರಳು
ಹಾಗಂತ ಬೆಳೆ, ಮೊಸರು ಬೀಸಾಕುವುದು ಸರಿಯೇನು?
ತೆಗೆಯಬೇಕು ಕಳೆ, ಹರಳು
 
ಸರಸದಲಿ ವಿರಸ ಹಣಿಕಿ ಹಾಕುವುದು ಆಗಾಗ
ಕ್ಷುಲ್ಲಕವದು ತುಂಬು ಪ್ರೇಮದಲಿ
ಹುಣ್ಣಿಮೆಯೂ ಇರಲಿ, ಅಮವಾಸೆಯೂ ಬರಲಿ
ಮಿಂದೇಳುವ ಪ್ರೇಮದಲಿ ನಮ್ಮ ಪಾಡಿಗೆ ನಾವು

‍ಲೇಖಕರು G

September 4, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vithal Dalawai

    ಬೆಳೆಯೊಳಗೆ ಕಳೆಯೂ ಬೆಳೆಯುವುದು
    ಮೊಸರೊಳಗೂ ಬೀಳುವುದು ಒಮ್ಮೊಮ್ಮೆ ಹರಳು
    ಹಾಗಂತ ಬೆಳೆ, ಮೊಸರು ಬೀಸಾಕುವುದು ಸರಿಯೇನು?
    ತೆಗೆಯಬೇಕು ಕಳೆ, ಹರಳು
    ತುಂಬ ಇಷ್ಟವಾದ ಸಾಲುಗಳು. ಕಾವ್ಯಯಾನ ಮುಂದುವರೆಯಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: