ಪ್ರಶಾಂತ್ ಎಮ್ ಸಿ
ಬಾನಾಡಿ ಬಂಧು ಓಡೋಡಿ ತಂದು
ಬಾಗಿಲು ಬಡಿದಿದೆ ವಿಷಕಾರಿ ಮಾರಿ
ಕೋಳಿ ಕೊಕ್ಕ ಆಡು ಓಕೆ
ನಮ್ಮೂರ ಮಾರಿಗೆ.
ಮನೆ ಮನೆ ಮನ್ಸಾನೆ ಬೇಕು
ನಿಮ್ಮ ಫಾರಿನ್ ಬ್ರಾಂಡಿಗೆ.
ಅಂತ್ಯವೆಂದೋ ಆ ಪರದೇಶಿಗೆ ?
ಬೀದಿ ಬೀದಿ ಬದಿ ತುಂಬಿ
ಮನೆ ಮನೆಯೇ ಆಗಿ ಕಂಬಿ
ಒಳಗಿನ ಕಸ ಹೊರಗರಡಿ
ಹಳ್ಳಹಿಡಿತು ನಿಮ್ಮ ಪೇಟೆ ಕರಡಿ
ಆ ಅರ್ಥದೂರಿಗೆ ಅರ್ಥವೆಂದೋ!?
ಹರಡಿದ ಹಾರಾಡೋ ಜನ
ಗಂಟೆ ಬಾರ್ಸಿ ದೀಪ ಬೆಳಗ್ಸುದ್ರೂ
ಬೆವರಿಳಿಸೋ ಬದುಕಲಿ
ಬೆಳಗಿಲ್ಲ ಹಸಿವಿನ ಹಣತೆ
ಹಬ್ಬೀತು ಹೇಗೆ ಒಲವಿನ ಲತೆ ?
ಅಂಬೆಗಾಲಿಗೆ ಅಂಬಲಿಯಿಲ್ಲ
ನಮ್ಗೆ ಅಂಬರದೂರಿನ ಗೇಣ್ಯಾಕೆ
ಬಲ್ಲಿದರ ಪಾಲಿಗೆ ಬೇಲಿಯಿಲ್ಲ
ಭೇದಭಾವ ನಮ್ಮ ಅಂಗಳಕ್ಯಾಕೆ ?
ಒಪ್ಪೊತ್ತಿಗೆ ಹಿಟ್ಟಿಕ್ಕಿ ಅಷ್ಟೇ ಸಾಕು !!
ಪಟ್ಟಣದ ಪೊಟ್ಟಣ ತಲುಪುತ್ತಿಲ್ಲ
ಏಕಾಂತ ಏಕಂತ ಕೇಳುವವರಿಲ್ಲ
ಕೂಲಿ ಕಂಬಳವಿಲ್ಲ ಕಣ್ಣಾಲಿ ನೀರಿಲ್ಲ
ಕನಿಕರಿಸಿ ಹಾಳುವವರೇ ಅಳುವವರ
ಅಳುವಿಂದೆದ್ದ ಮತ್ತೊಂದು ರೋಗಾಣು
ಆಳುವ ಜನರ ಹೂಳುವ ಮುನ್ನ
ಮೆರೆದು ಮಾನವೀಯತೆ
0 ಪ್ರತಿಕ್ರಿಯೆಗಳು