ಪ್ರಕಾಶ್‍ ಕೊಡಗನೂರ್ ಕವಿತೆ – ಸಾವು ಮತ್ತು ನಾವು…

ಪ್ರಕಾಶ್‍ ಕೊಡಗನೂರ್

1. ಸಾವು ಮತ್ತು ನಾವು

ಹೊತ್ತಲ್ಲದ
ಹೊತ್ತಿನಲಿ ಎದ್ದು
ಸದ್ದಿಲ್ಲದೆ
ನಿರಾಕಾರವ ಹೊದ್ದು
ಯಾರಿಗೂ ಅರಿವಾಗದೆ
ಮುಲಾಜಿಗೂ ಒಳಪಡದೆ
ಎಲ್ಲೆಂದರಲ್ಲಿ ಎರಗಿ
ಬೇಕಾದವರನ್ನು ಬೇಕಾಬಿಟ್ಟಿ
ಬಲಿಪಡೆವ ದಗಾಕೋರ

ಅವರಿವರೆಂದು
ಭೇದ ತೋರದೆ
ಅಕಾಲ ಸಕಾಲವೆಂದು
ಸಮಯ ಗುಣ ಸದೆ
‘ಜೀವ ಎತ್ತಾಕು’ವ
ನಿರ್ಲಜ್ಜ ನಿಷ್ಠುರ
ನಿರ್ಭಾವುಕ ತೀರ್ಪನ್ನೀಡುವ
ಸರ್ವಾಧಿಕಾರಿ ನ್ಯಾಯಾಧೀಶ

ಕನಸೂ ಬೇಡದ
ಮನಸೂ ಒಪ್ಪದ
ಅಂಧಾದರ್ಬಾರಿನ ದಿವಾನ;
ಸರ್ವರೊಳು ಸದಾ
ಭಯಾತಂಕ ಸೃಷ್ಟಿಸುವ
ನಿಷ್ಕರುಣ ಸೈತಾನ

ಆದರೆ…
ತಾನು ಮಾತ್ರ
ಕೊನೆ ಮೊದಲಿಲ್ಲದ
ಮಹಾಚೇತನ!

2. ಸ್ವಗತ

ಭಾವದ ಅಲೆಯಲಿ ತೇಲುತ
ಮೋಹದ ಬಲೆಯಲಿ ಬಿಕ್ಕುತ
ದಾಹದ ಕಡಲಲಿ ಉಕ್ಕುವ
ಪ್ರೀತಿಗೆ ತೃಪ್ತಿ ಕಾಣೆ

ವೃತ್ತಿಪರತೆಯಲಿ ಉರುಳುತ
ಚಿರಬೇನೆಯಲಿ ನರಳುತ
ಏಕತಾನತೆಯಲಿ ಕೊಳೆವ
ಬದುಕಿಗೆ ದಿಕ್ಕು ಕಾಣೆ

ಭೂತಾರಾಧನೆಯಲಿ ಬೇಯುತ
ಭವಿಷ್ಯತ್ತಿನಾತಂಕದಲಿ ಕೊರಗುತ
ವರ್ತಮಾನದಲಿ ಹಳಸುವ
ಮನಸಿಗೆ ಕನಸು ಕಾಣೆ

ಸಹನೆಯಲಿ ಸಾಯುತ
ಕ್ಷೋಭೆಯಲಿ ಸಿಡಿಯುತ
ಸಮತೆಯಲಿ ಎಡವುವ
ಬುದ್ಧಿಗೆ ಬೆಳಕು ಕಾಣೆ

ಇದೆಲ್ಲದರ ನಡುವೆ
ಪವಾಡವೆಂಬ೦ತೆ ಬೆಸೆದ
ಭರವಸೆಯೊಂದು ಉಳಿದಿದೆ
ಎಂಬುದಷ್ಟೇ ಸದ್ಯದ ಆಣೆ

‍ಲೇಖಕರು Admin

March 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: