ಪಿ ನಂದಕುಮಾರ ಹೊಸ ಕವಿತೆ- ಒಂಟಿ ಹೂ

ಪಿ ನಂದಕುಮಾರ

**

ಈ ಓಣಿಯ ಕೊನೆಗಿರುವ ದಾರಿ ತಿರುವಿನಲ್ಲಿ 

ಹೂ ಅರಳಿರಬಹುದು

ಅದರ ನೆರಳು ನೀನೇ ಯಾಕಾಗಿರಬಾರದು?

ಹಗಲು-ಇರುಳಿನ ನಡುವೆ

ನೆಟ್ಟ ದೀಪಗಳ ಬೆಳಕು 

ಉಗುಳಿ ಹೋಗಿದ ಮೌನ 

ನೀನೇ ಯಾಕಾಗಿರಬಾರದು?

ಸುಡುವ ನೆತ್ತಿಯ ಮೇಲೆ

ಹಗಲ ಕಣ್ಣಿನ ಸೂರ್ಯ

ತೇಪೆ ಹೊಲೆದ ನೆರಳು

ಸುಳಿವಾತ್ಮ ನೀನೇ ಯಾಕಾಗಿರಬಾರದು?

ಬಿರಿದ ಒಂಟಿ ಹೂ

ಚೆಲ್ಲಿಹೋದ ಬಿಂಬ

ನೆನ್ನೆ ಹಗಲನು ಇಂದು ಮುಡಿಯಬಹುದೇ?

ಇದ್ದ ದಾರಿಯು ಬೇರೆ

ತುಳಿದ ದಾರಿಯು ಬೇರೆ

ಕೂಡುವಲ್ಲಿ ನಾವು

ಒಂದೇ ಆದೆವು

ಕ್ಷಣಕ್ಕೆ ಮಾಸಿದ ಗಾಯ

ಉಳಿಸಿ ಹೋಗಿದೆ ನೋವು

ನಗುವ ಚೆಲ್ಲುವವರು ಯಾರು

ದಿಟದ ದಾರಿಗೆ

‍ಲೇಖಕರು avadhi

February 29, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಧರ್ಮಣ್ಣ ಎಚ್ ಧನ್ನಿ

    ಚೆಂದದ ಕವಿತೆಗಳು. ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: