ಪಾಪದ ಹೂವಾದರೂ ಆಗಬೇಕಿತ್ತು..

-ಅಭಿಷೇಕ್ ವೈ.ಎಸ್.

ಬೆಳಕು ಹರಿಯುವ ಮುನ್ನ
ನೆತ್ತರು ಮೆತ್ತಿಕೊಂಡು
ಇಬ್ಬರ ಗುಟ್ಟುಗಳನ್ನು ಬಚ್ಚಿಟ್ಟ ರಾತ್ರಿಯಲ್ಲಿ
ಯಾರೂ ಕಸಿಯಲಾರದ ಮಾತುಗಳನ್ನಾದರೂ
ಆಡಬೇಕಿತ್ತು..

ನನ್ನ ಎದೆಯ ಮಹಲಿನಲ್ಲಿ
ಮಹಾಕಾವ್ಯ ಬರೆದ ನಿನ್ನ
ಒಣಗಿದ ತುಟಿಗಳನ್ನು
ಒಮ್ಮೆಯಾದರೂ
ಚುಂಬಿಸಿ
ವಿದಾಯ ಹೇಳಬೇಕಿತ್ತು.

ನಿನ್ನ ಕಣ್ಣೊಳಗಿನ
ಒಡೆದುಹೋದ
ನನ್ನ ಬಿಂಬದ ಸಣ್ಣ ಚೂರನ್ನಾದರೂ
ಜತನಮಾಡಿಟ್ಟುಕೋ
ಎನ್ನಬೇಕಿತ್ತು..

ಯೌವನವೇ ಕುಣಿವ

ನನ್ನ ದೇಹದಲ್ಲಿ
ಅಂಟಿದ
ನಿನ್ನ ಬೆವರಿನ
ಕ್ಷಮೆಯನ್ನಾದರೂ
ಕೇಳಬೇಕಿತ್ತು.

ಹೊಳೆಯುವ ನಕ್ಷತ್ರಗಳ
ಗೊಂಚಲುಗಳನ್ನಾದರೂ
ನಿನ್ನ ಮುಡಿಯಲ್ಲಿಟ್ಟು
ಮೌನವನ್ನು ಉರಿಸುತ್ತ
ಈ ರಾತ್ರಿ ಕಳೆಯಬೇಕಿತ್ತು.

ಕತ್ತಲ ಕಫನ್ನಿನೊಳಗೆ
ಸುತ್ತಿಟ್ಟ ಚಂದಿರನಿಗೆ
ಮತ್ತೆ ಜೀವಬರಲಾಗದು;
ಕನಿಷ್ಟಪಕ್ಷ ಅವನ
ಶವಯಾತ್ರೆಯಲ್ಲಿ
ಪಾಪದ ಹೂವಾದರೂ
ಆಗಬೇಕಿತ್ತು.

‍ಲೇಖಕರು avadhi

April 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: