ಸಾವಿರ ಗಾಯಗಳು ಮಾದಿವೆಯಷ್ಟೇ..

ಅವ್ವ

ರಾಜೀವ ಸಖ
ಹರಿದ ಜೋಡುಗಳಿಗೆ
ಆದೇ ಆಲದ ಬಿಳಲ ಪೋಣಿಸಿ, ಸುಡುಬಿಸಿಲೊಳು
ದರಾ ಬರಾ ಎಳಕೊಂಡ ಉಂಗುಟ,
ಮತ್ತೆ ಬಿಗಿಯಾಗದಷ್ಟು ಸವೆಸಿದ ಎದೆಯ,
ಸಾವಿರ ಗಾಯಗಳು ಮಾದಿವೆಯಷ್ಟೇ..

ಹಸಿದ ಹೊಟ್ಟೆಯಾ ತುಂಬಾ, ಮಾರ್ಜಾಲನೂ ನಾಚಿಸುವಷ್ಟು, ಗೊರ್ರರ್ರೋ ಎನುವಾ..
ಶಬುಧಗಳ ಪೇರಿಸಿಟ್ಟ ಹಸಿವೆಯ ರಾತ್ರಿಗಳಿಗೆ,
ಮುದ್ದೆ ಅಂಬಲಿ ಕನವರಿಕೆಯಷ್ಟೇ..
ಮತ್ತಾವ ಆಸೆ, ಅಸೂಯೆಗಳ ಹೊತ್ತು
ಗೊತ್ತುಗಳ ಅರಿವಿರಲಿಲ್ಲ..

ನೇಸರನ ಇರುವ ಬಯಸದೇ,
ನೆನಪ ಗಡಿಯಾರ ಗೋಪುರಕೆ ಆನಿಸಿದ ಮನಸು,
ಅಜ್ಜನ ಕೋಲ ಗೌಜ ಕಾಯದೇ ಎದ್ದು,  ಚಳಿಗಾಲಕೂ ಬೆವರಿಳಿಸಿ
ಶಯ್ಯೆಯೂಡಿಸಿದ,
ಅಪರಿತ ಸ್ಮೃತಿಗಳ‌ ತೇವವಿದೆ..

ಹರಿದ ಚಡ್ಡಿಗೆ ಅಗಣಿತ ಮುತ್ತುಗಳ,
ಪೋಣಿಸಿದ ಅವ್ವನ ಕೈಗಳು ಈಗೀಗ ಸುಕ್ಕತ್ತಿವೆಯಾದರೂ,
ಈಗಲೂ ನೀನೊಬ್ಬ ಮುಕ್ಳರ್ಕ ಕಣೋ.. ಎನುವ ಅವಳ ಮಾತಿನಲಿ ಲವಲೇಶವೂ ಅವಾಚ್ಯವಿಲ್ಲ.

ಅವಳೊಬ್ಬ ವರ್ಣ ಓಕುಳಿ ರಾಶಿಯ..
ಜಿಹ್ವೆಗೆ, ಮೈಕೈಗೆ ಸವರಿಕೊಳ್ಳದ, ಸರ್ವಕಾಲಕೂ..
ನಿಷ್ಕಲ್ಮಷ ನಿಲುಮೆಯಾಗುವ, ಸ್ಫೂರ್ತಿಮೆದ್ದ ಪ್ರೀತಿಯ ಕವಿತೆ..

‍ಲೇಖಕರು avadhi

April 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: