ಪಯಣ

 ರೇಶ್ಮಾ ಗುಳೇದಗುಡ್ಡಕರ್

ನಡೆಯುತ್ತ ನಡೆಯುತ್ತಾ ನಡೆದ 

ದಾರಿಯೇ ಕಾಣಲಿಲ್ಲ ಹಿಂತಿರುಗಿ 

ನೋಡಿದಾಗ ಮುಂದಿರುವ ಗೂಢಾರಣ್ಯವು  

ನಡಿಗೆಗೆ ಧೊಳಿಪಟವಾಗಿ 

ಅವಶೇಷವೇ ಇಲ್ಲದಂತಾಗಿತ್ತು  …..!

ಬದುಕಿನ ಪ್ರವಾಹಕ್ಕೆ ನಿಲ್ಲದ 

ಪಯಣ ರಭಸದಿ ಹುಡುಕುತ್ತಲೆ 

ಇತ್ತು ನೆಮ್ಮದಿಯ ದಡವ 

ದಣಿವರಿಯದ ದೇಹದ ಜೊತೆಗೆ 

ಹೆಗಲಲ್ಲಿ ಭದ್ರವಾಗಿದ್ದವು ಕನಸಿನ 

ಜೋಳಿಗೆ

ಒಮ್ಮೊಮ್ಮೆ ನಿಂತಲ್ಲೇ ನಿಂತು,

ಕಾದು ,ಕಾದು , ಕೆಂಡಕಿಂತಲು 

ಬಿಸಿಯಾಗಿ ! ಎಲ್ಲ ಬೇಗುದಿಗಳನ್ನು 

ತನ್ನೊಳಗೆ ಸುಟ್ಟು ಬೂದಿಮಾಡಿತು ……

ದಿಟ್ಟತನ ನೋಡುಗರ ಎದೆಯಲ್ಲಿ 

ಭಯದ ಬುಗುರಿಯ ಆಡಿಸಿದ್ದು 

ಕ್ಷಣ ಮಾತ್ರದಲ್ಲಿ 

ಸಂಕೋಲೆಗಳನ್ನು ಕಿತ್ತು ಒಸೆದಮೇಲೆ 

ಹೆದರುವದು ಯಾತಕ್ಕೆ ?

ಭವಿಷ್ಯ ಕ್ಕೂ ,ವಾಸ್ತವಕ್ಕೂ …..

ಬಿರುಗಾಳಿಗೆ ಸಿಕ್ಕ ತರಗೆಲೆಯಂತಾದವು 

ಭಯದ ಭೂತಗಳು …

‍ಲೇಖಕರು Avadhi

September 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: