ಪಚ್ಚೆ ನಂಜುಂಡಸ್ವಾಮಿ ಕವಿತೆ- ಭಗವಂತ ಎಲ್ಲಿ ಇರುವೆ ನೀ..

ಮೂಲ: ಸ್ವಾನಂದ್ ಕಿರ್ಕಿರೆ

ಕನ್ನಡಕ್ಕೆ: ಪಚ್ಚೆ ನಂಜುಂಡಸ್ವಾಮಿ

ಇಡೀ ಭೂಮಿಯನ್ನು, ನಡೆಸುವೆಂದು ಕೇಳಿರುವೆ..
ನನ್ನ ಪ್ರಾರ್ಥನೆ ಕೇಳು, ನಿನ್ನ ಮನೆಗೆ ನನ್ನ ಕರೆದು..
ಭಗವಂತ ಎಲ್ಲಿ ಇರುವೆ ನೀ..
ಓ ಅಲ್ಲಾ ಎಲ್ಲಿ ಇರುವೆ ನೀ..

ಅಲೆವ ಮನಕೆ ದಾರಿ ತೋರುವೆಂದು ನಂಬಿರುವೆ..
ನಾನು ಕಳೆದುಹೋಗಿಹೆ, ನಿನ್ನ ಮನೆಗೆ ನನ್ನ ಕರೆ ನೀ..
ಭಗವಂತ ಎಲ್ಲಿ ಇರುವೆ ನೀ..
ಓ ಅಲ್ಲಾ ಎಲ್ಲಿ ಇರುವೆ ನೀ..

ನಾ ಪೂಜೆ ಮಾಡಲೇ? ನಮಾಜ್ ಗಳ ಓದಲೇ?
ಪ್ರಾರ್ಥನೆಗಳ ಮಳೆ ಸುರಿಸಲೇ…
ನೀ ಮಂದಿರದಲ್ಲಿಲ್ಲ
ನೀ ಚರ್ಚ್ನಲ್ಲೂ ಇಲ್ಲ
ಹುಡುಕಿ ಕಣ್ಗಳು ಸುಸ್ತಾದ್ವು ನನಗೆ…
ಹುಡುಕಿ ಕಣ್ಗಳು ಸುಸ್ತಾದ್ವು ನನಗೆ…

ಎಂಥಾ ಆಚರಣೆಯೇ ಇದ್ದರೂ ಪೂರೈಸುವೆ…
ಕೋಟಿಗಟ್ಟಲೆ ಜನರ ರೀತಿ ತಲೆಯ ಬಾಗುವೆ..
ಭಗವಂತ ಎಲ್ಲಿ ಇರುವೆ ನೀ..
ಓ ಅಲ್ಲಾ ಎಲ್ಲಿ ಇರುವೆ ನೀ..

ನಿನ್ನ ನಾಮವು ಹಲವು
ನಿನ್ನ ಚಹರೆ ಹಲವು
ನಿನ್ನ ಪಡೆವ ದಾರಿಯೂ ಹಲವು..
ನಿನ್ನ ಪಡೆವ ದಾರಿಯೂ ಹಲವು..

ಎಲ್ಲಾ ದಾರಿ ನಡೆದೆ..
ನೀ ಸಿಗಲೇ ಇಲ್ಲ..
ನಿನ್ನ ಬಯಕೆ ನನಗೆ ತಿಳಿಯಲೇ ಇಲ್ಲ..

ಯೋಚಿಸದೆ ಸರ್ವ ಯತ್ನ ಮಾಡುತಿರುವೆನು..
ನಿನ್ನ ಹಠಗಳ ಕಣ್ಣಲ್ಲಿಟ್ಟು ನಿಭಾಯಿಸುತ್ತಿರುವೆ..
ಭಗವಂತ ಎಲ್ಲಿ ಇರುವೆ ನೀ..
ಓ ಅಲ್ಲಾ ಎಲ್ಲಿ ಇರುವೆ ನೀ..

ಇಡೀ ಭೂಮಿಯನ್ನು, ನಡೆಸುವೆಂದು ಕೇಳಿರುವೆ..
ನನ್ನ ಪ್ರಾರ್ಥನೆ ಕೇಳು, ನಿನ್ನ ಮನೆಗೆ ನನ್ನ ಕರೆದು..
ಭಗವಂತ ಎಲ್ಲಿ ಇರುವೆ ನೀ..
ಓ ಅಲ್ಲಾ ಎಲ್ಲಿ ಇರುವೆ ನೀ..

‍ಲೇಖಕರು Avadhi

June 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: