ಮಲ್ಲಿಕಾರ್ಜುನ ಹೊಸಪಾಳ್ಯ
ಸುವಾಸನಾಯುಕ್ತವಾದ, ಕನ್ನಡ ನಾಡು ಮೂಲದ ಪಾರಂಪರಿಕ ಭತ್ತದ ತಳಿ ಗಂಧಸಾಲೆ (ಗಂಧಶಾಳಿ) ಬಗ್ಗೆ ಪಂಪಮಹಾಕವಿ (ಕ್ರಿ.ಶ. ೯೦೨-೯೫೦) ಪ್ರಸ್ಥಾಪಿಸಿರುವುದು ಅಚ್ಚರಿಯ ಸಂಗತಿ.
ತನ್ನ ಮೇರು ಕೃತಿಯಾದ ’ವಿಕ್ರಮಾರ್ಜುನ ವಿಜಯ’ ದಲ್ಲಿ ಎರಡು ಕಡೆ ಈ ಬಗ್ಗೆ ಪ್ರಸ್ಥಾಪ ಬರುತ್ತದೆ.
“ಬೆಳೆವುದು ದೇವಮಾತೃಕೆಮೆನಿಪ್ಪ
ಪೊಲಂ ನವ ಗಂಧಶಾಳಿಯಂ”
ಎಂದು ಒಂದು ಕಡೆ ಪ್ರಸ್ಥಾಪವಾದರೆ,
“ಸುತ್ತಲೂ ಪರಿವ ಜರಿವೊಲನಲ್ಗಳಿಂ
ದೆತ್ತುಲ ನಲಿವ ಪೊಸ ನವಿಲ್ಗಳಿಂ
ಬೆಳೆದು ಮಗಮಗಿಪ ಗಂಧಶಾಳಿಯಿಂ”
ಎಂದು ಮತ್ತೊಂದು ಕಡೆ ಬರುತ್ತದೆ.
ಸಾವಿರದಿನ್ನೂರು ವರ್ಷಗಳ ಹಿಂದೆಯೇ ಇದ್ದ ಒಂದು ತಳಿ ಇಂದಿಗೂ ನಮ್ಮ ರೈತರ ಹೊಲಗದ್ದೆಗಳಲ್ಲಿ ಬೆಳೆಯುತ್ತಿರುವುದು ಎಂತಹ ರೋಮಾಂಚಕ ವಿದ್ಯಮಾನ.
ಪಂಪನು ಪ್ರಸ್ಥಾಪಿಸುವ ’ದೇವ ಮಾತೃಕೆ’ ಎಂಬುದು ನೀರಾವರಿ ಜಮೀನನ್ನು ಸೂಚಿಸುತ್ತದೆ. ಅಂದರೆ ಗಂಧಸಾಲೆಯು ನೀರಾವರಿ ಭೂಮಿಯಲ್ಲಿ ಇಲ್ಲವೇ ಮಳೆಗಾಲದಲ್ಲಿ ಬೆಳೆಯುತ್ತಿದ್ದ ತಳಿಯಾಗಿದೆ.
0 ಪ್ರತಿಕ್ರಿಯೆಗಳು