ನೂತನ ದೋಶೆಟ್ಟಿ
ಮಸಿ ಬಳಿದವರ ಮನದ
ಕತ್ತಲು ಬೆತ್ತಲಾಯಿತು
ಮರೆಯ ಮಲಿನತೆಯ
ಮುಸುಕು ಸರಿಯಿತು
ಬಣ್ಣಕ್ಕೊಂದು ಅರ್ಥ
ಕೊಟ್ಟವರು ಯಾರು?
ಕಪ್ಪು-ಬಿಳುಪುಗಳ
ಒಳಿತು-ಕೆಡಕುಗಳಿಗೆ
ಆರೋಪಿಸಿದವರೆ ತಾನೆ?
ಆ ಸಂತತಿಯಲ್ಲಿ ಸಂತನನ್ನು
ಕಾಣ ಬಯಸುವವರೇ
ಬದಲಾಯಿಸಿ ಬಿಡಿ
ಬಣ್ಣದ ಅರ್ಥಗಳ
ಅದಲು ಬದಲಾಗಲಿ
ಛಾಯೆಗಳು
ಕರಿಯು ದೀವಳಿಗೆಯ ಬೆಳಕಾಗಲಿ
ಬಿಳುಪು ಬಿಳಚಿದ ಮರ್ಮವಾಗಲಿ
ಸೈರಣೆಯ ಕಾಲವಿದಲ್ಲ
ಸೆಡ್ಡು ಹೊಡೆಯಬೇಕು
ಸೆಣೆಸಿ ಗೆಲ್ಲಬೇಕು
ಬಣ್ಣಗಳೇ ದಾಳವಾಗಲಿ ಬಿಡಿ.
ಧ್ವನಿಪೂರ್ಣ ಕವಿತೆ.
ಬಣ್ಣಗಳಿಗೆ ಸಂತನ ದೃಷ್ಟಿ ಕಲ್ಪಿಸುವುದು ಕವಿತೆ ಮಾತ್ರ ಸಾಧ್ಯ..
ಧನ್ಯವಾದಗಳು ನಾಗರಾಜ್ ಅವರೆ
ಅರ್ಥ ಪೂರ್ಣ ಕವನ,ಮನ ಮೆಚ್ಚಿದ ಶಬ್ದಾವಳಿ.