ನೂತನ ದೋಶೆಟ್ಟಿ ಹೊಸ ಕವಿತೆ- ಮುಖದ ಮೇಲೆ ಮಸಿ

ನೂತನ ದೋಶೆಟ್ಟಿ

ಮಸಿ ಬಳಿದವರ ಮನದ
ಕತ್ತಲು ಬೆತ್ತಲಾಯಿತು
ಮರೆಯ ಮಲಿನತೆಯ
ಮುಸುಕು ಸರಿಯಿತು

ಬಣ್ಣಕ್ಕೊಂದು ಅರ್ಥ
ಕೊಟ್ಟವರು ಯಾರು?
ಕಪ್ಪು-ಬಿಳುಪುಗಳ
ಒಳಿತು-ಕೆಡಕುಗಳಿಗೆ
ಆರೋಪಿಸಿದವರೆ ತಾನೆ?

ಆ ಸಂತತಿಯಲ್ಲಿ ಸಂತನನ್ನು
ಕಾಣ ಬಯಸುವವರೇ
ಬದಲಾಯಿಸಿ ಬಿಡಿ
ಬಣ್ಣದ ಅರ್ಥಗಳ

ಅದಲು ಬದಲಾಗಲಿ
ಛಾಯೆಗಳು
ಕರಿಯು ದೀವಳಿಗೆಯ ಬೆಳಕಾಗಲಿ
ಬಿಳುಪು ಬಿಳಚಿದ ಮರ್ಮವಾಗಲಿ

ಸೈರಣೆಯ ಕಾಲವಿದಲ್ಲ
ಸೆಡ್ಡು ಹೊಡೆಯಬೇಕು
ಸೆಣೆಸಿ ಗೆಲ್ಲಬೇಕು
ಬಣ್ಣಗಳೇ ದಾಳವಾಗಲಿ ಬಿಡಿ.

‍ಲೇಖಕರು Avadhi

February 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ನಾಗರಾಜ್ ಹರಪನಹಳ್ಳಿ

    ಧ್ವನಿಪೂರ್ಣ ಕವಿತೆ.
    ಬಣ್ಣಗಳಿಗೆ ಸಂತನ ದೃಷ್ಟಿ ಕಲ್ಪಿಸುವುದು ಕವಿತೆ ಮಾತ್ರ ಸಾಧ್ಯ..

    ಪ್ರತಿಕ್ರಿಯೆ
    • ನೂತನ ದೋಶೆಟ್ಟಿ

      ಧನ್ಯವಾದಗಳು ನಾಗರಾಜ್ ಅವರೆ

      ಪ್ರತಿಕ್ರಿಯೆ
  2. Anju

    ಅರ್ಥ ಪೂರ್ಣ ಕವನ,ಮನ ಮೆಚ್ಚಿದ ಶಬ್ದಾವಳಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: