‘ನುಡಿ ಕೆಫೆ’ಗೆ ಭೇಟಿ ನೀಡಿ..

ಕೇಶವ ಮಳಗಿ

**

ಬಳ್ಳಾರಿಗೆ ಹೋದವರು ತಾಳೂರು ರಸ್ತೆಯಲ್ಲಿರುವ ‘ನುಡಿ ಕೆಫೆ’ಗೆ ಭೇಟಿ ನೀಡಿ. ಕಾಫಿ ಜತೆ ಪುಸ್ತಕಗಳ ಮೇಲೆ ಕಣ್ಣು ಹಾಯಿಸಿ. ಸುಡು ಬಿಸಿಲಿನಲ್ಲಿ ಕಾಫಿ ಅಥವ ಚಹಾ ಕುಡಿಯುವುದೇ ಈ ಸೀಮೆಯ ಕಡ್ಡಾಯ ಸಂಪ್ರದಾಯ. ‘ನುಡಿ ಕೆಫೆ’ಯ ರೂವಾರಿ: ಹಿಂದೆ ಕಥೆಗಾರರಾಗಿದ್ದ, ಸದ್ಯ ಮಕ್ಕಳ ಸಾಹಿತ್ಯದಲ್ಲಿ ತಲ್ಲೀನರಾಗಿರುವ ಮತ್ತು ಅದೇ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ಪೂರೈಸಿರುವ ಶಿವಲಿಂಗಪ್ಪ ಹಂದ್ಯಾಳು.

ಅವರು ಅಥವ ಬೇರಾವುದೇ ಸಾಹಿತ್ಯಾಸಕ್ತರು ಎದುರಾದರೆ ನಮ್ಮ ಸೀಮೆಯ ಜನ ಬೆಂಗಳೂರು ಸಾಹಿತ್ಯ ರಾಜಕಾರಣಿಗಳ ಕುರಿತು ಎಂಥ ಅಭಿಪ್ರಾಯ ಹೊಂದಿದ್ದಾರೆ ಎಂದು ನಿಮಗೆ ತಿಳಿಯುವುದು. ಇಷ್ಟಕ್ಕೂ ಕಾಫಿ ಕುಡಿದು ನಾಲಿಗೆ ದಪ್ಪಗಾಗುವ, ಬಿಸಿಲಿಗೆ ತಲೆ ಧಿಮ್ಮೆನ್ನುವ ಪ್ರಕೃತಿಯವರಾದರೆ ನೇರ ಕಾಳಮ್ಮ ಬೀದಿಗೆ ಹೋಗಿ ‘ನನ್ನೇರಿ’ ಸೇವಿಸಿ.

ಸೋಡಾ, ಐಸ್ ಕ್ಯೂಬ್ ಹಳಕುಗಳು, ಹತ್ತಾರು ಬಣ್ಣದ ಸಕ್ಕರೆ ಪಾಕದ ಈ ಪೇಯ ನಮ್ಮಲ್ಲಿ ಮಾತ್ರ ಸಿಗಲು ಸಾಧ್ಯ. ಈ ತಲೆ ಒಡೆಯುವ ಬಿಸಿಲಿಗೆ ಏನೇ ಮಾಡಿದರೂ, ಸೇವಿಸಿದರೂ ಸಮಾಧಾನವಿಲ್ಲ ಎಂಬ ಭಾವದವರಾದರೆ ಒಂದು ಥಣ್ಣನೆ ಬಿಯರು, ಒಗ್ಗಣ್ಣಿ ಮೆಣಸಿನಕಾಯಿ ಸೇವಿಸಿ ಹಂಪಿ ಎಕ್ಸ‌ಪ್ರೆಸ್ ಮೂಲಕ ನಿಮ್ಮ ಊರು ಸೇರಿಕೊಳ್ಳಿ. ಬಳ್ಳಾರಿ ಮರೆಯಾದರೂ- ಮರೆಯಾಗುವುದಿಲ್ಲ ನೀವು ಇಲ್ಲಿ ಪಡೆದ ಅನುಭವ ನರಜೀವಕ್ಕೆ ಗುರು ಕಿವಿಯಲಿ ನೀಡಿದ ಮಂತ್ರಾಕ್ಕರದ ಶಬ್ದದ ಹಾಗೆ, ನೆತ್ತಿಯಿಂದ ಉದುರಿ ನೆಲಕೆಲ್ಲ ದೈವ ಪರಿಮಳವನ್ನು ಸೂಸುವ ಇಲ್ಲಿನ ಮಲ್ಲಿಗೆಯ ಹೂವಿನ ಹಾಗೆ.

‍ಲೇಖಕರು Admin MM

May 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: