ಕುರುಡಾಗಲಿ ಇಂದೆ
– ರೇಣುಕಾ ಎ ಕಠಾರಿ
ಇಲ್ಲದ ಬೆಳಕನು
ಹುಡುಕಲು ಬೆನ್ನಟ್ಟಿದ್ದೇನೆ ಪ್ರತಿದಿನ
ಕತ್ತಲೆ ಚೀರಿಡುತ್ತಿದೆ
ಸಾವ ಭಯಕೆ ಕೂಗಿ ಕೂಗಿ ಸತ್ತೆನೆಂದು
ಲೋಕಪೂಜ್ಯರು ಇದ್ದ ನೆಲ
ಇಂದು ಸಾವಿನ ಕಂಕಣ ತೊಟ್ಟ
ಕಸಾಯಿಖಾನೆಯಾಗಿದೆ
ಹೆಣ್ಣು, ಹೊನ್ನು ಮಣ್ಣು
ಹೊರತಾಗಿಯೂ ಕಲಹವಿದೆಯೇ
ಲೋಕದೆದುರು
ಸಂಧಿಗಳೆದುರು ನೊಂದ ಬದುಕಿನ
ಬೊಗಸೆ ಖಾಲಿಯೇ ಇದೆ
ನಿನ್ನ ರೂಪದ ಹೊರತು
ಕಣ್ಣು ಬೇರೇನೂ ಕಾಣಬಾರದು
ಕುರುಡಾಗಲಿ ಬಿಡು ಇಂದೆ
ಕವಿತೆ ಚೆನ್ನಾಗಿದೆ…
ಕವಿತೆ ಚೆನ್ನಾಗಿ ಬರೆದಿದ್ದೀರಿ.
ಚಂದ ಕವಿತೆ
Indina stithige kannadi hidida kavana. chennaagide Renuka!
Akka …. Naijateya paripurna saara… Kelavu padagalalli