ನಿನ್ನ ರೂಪದ ಹೊರತು ಕಣ್ಣು ಬೇರೇನೂ ಕಾಣಬಾರದು…

ಕುರುಡಾಗಲಿ ಇಂದೆ

– ರೇಣುಕಾ ಎ ಕಠಾರಿ

ಇಲ್ಲದ ಬೆಳಕನು
ಹುಡುಕಲು ಬೆನ್ನಟ್ಟಿದ್ದೇನೆ ಪ್ರತಿದಿನ
ಕತ್ತಲೆ ಚೀರಿಡುತ್ತಿದೆ
ಸಾವ ಭಯಕೆ ಕೂಗಿ ಕೂಗಿ ಸತ್ತೆನೆಂದು

ಲೋಕಪೂಜ್ಯರು ಇದ್ದ ನೆಲ
ಇಂದು ಸಾವಿನ ಕಂಕಣ ತೊಟ್ಟ
ಕಸಾಯಿಖಾನೆಯಾಗಿದೆ
ಹೆಣ್ಣು, ಹೊನ್ನು ಮಣ್ಣು
ಹೊರತಾಗಿಯೂ ಕಲಹವಿದೆಯೇ
ಲೋಕದೆದುರು
 
ಸಂಧಿಗಳೆದುರು ನೊಂದ ಬದುಕಿನ
ಬೊಗಸೆ ಖಾಲಿಯೇ ಇದೆ
ನಿನ್ನ ರೂಪದ ಹೊರತು
ಕಣ್ಣು ಬೇರೇನೂ ಕಾಣಬಾರದು
ಕುರುಡಾಗಲಿ ಬಿಡು ಇಂದೆ
 

‍ಲೇಖಕರು G

May 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಪ್ರಕಾಶ ಬಿ ಜಾಲಹಳ್ಳಿ

    ಕವಿತೆ ಚೆನ್ನಾಗಿದೆ…

    ಪ್ರತಿಕ್ರಿಯೆ
  2. ಕಾ.ಹು.ಚಾನ್ ಪಾಷ. ಬಂಗಾರಪೇಟೆ.

    ಕವಿತೆ ಚೆನ್ನಾಗಿ ಬರೆದಿದ್ದೀರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: