ನಿನ್ನೆದೆಯೊಳಗೊಮ್ಮೆ ಹೊಕ್ಕು ನೋಡು..

 

 

 

ಧ್ಯಾನ ದೀಪ

ಗಾಯತ್ರೀ ರಾಘವೇಂದ್ರ

 

 

ಓ ಅವನ ಕೊಂದೆ
ರಕ್ಕಸರ ಸದೆಬಡಿದ
ನಿನ್ನ ಕೈಗಳಿಗೆ ನೆತ್ತರ ಕಲೆ!

ನೀ ಮುಡಿಸಲಿ ಎಂದು ಕಾದ
ಅರೆಬಿರಿದ ಮಲ್ಲಿಗೆ ಹಳಸಿ ಹೋಗಿ
ಯಾವ ಕಾಲವಾಯಿತು ಬಲ್ಲೆಯಾ?
ಯಾಕೋ ಬಿಡಿಸಿಟ್ಟ ಹೂಗಳಲೂ
ರಕ್ತದ ಕಮಟು

ನೀ ಕದ್ದು ನೆಕ್ಕಿದ ಬೆಣ್ಣೆ
ತೊಟ್ಟ ಕೊರಳ ಮಾಲೆ ಕೈಯಲಿ ಸದಾ ಕೊಳಲು
ತುಂಟ ನಗೆ ಕಂಡವಳು ನಾನು
ಹಸಿರ ವೃಂದಾವನದಲಿ
ಎದೆಗುಡಿಯೊಳಗೆ ಕಾಪಿಟ್ಟ
ಪುಟ್ಟ ಪ್ರೇಮದ ಮೂರ್ತಿ

ನರರುಂಡ ಚೆಂಡಾಡಿ
ಉರಿದುಬಿದ್ದ ವೈರಿಗಳುಸಿರ ನಿಲ್ಲಿಸಿ
ಧಗ ಧಗನುರಿವ ಕೆಂಡ ಕಂಗಳ
ಕ್ರೌರ್ಯ ಕಾಣಬಯಸುವುದಿಲ್ಲ
ರಣರಂಗದಲಿ ಮಲ್ಲಿಗೆಯ
ನೆಡಬೇಕಿಲ್ಲ ನೀನು
ನಿನ್ನೆದೆಯೊಳಗೊಮ್ಮೆ ಹೊಕ್ಕು ನೋಡು
ನಾನೇ ಕಟ್ಟಿಟ್ಟ ದಂಡೆ
ಹಚ್ಚಿದೊಲವ ಬತ್ತಿ
ಬೆಳಗಿದದಮ್ಯ ಧ್ಯಾನದೀಪ

‍ಲೇಖಕರು avadhi

December 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: