ನಾಸಿರುದ್ದೀನ್ ಶಾ ರಿಂದ ‘ಹಲ್ಲಾ ಬೋಲ್’ ಬಿಡುಗಡೆ

ಮಹತ್ವದ ರಂಗಕರ್ಮಿ, ಜನಪರ ಹೋರಾಟಗಳ ಮುಂಚೂಣಿಯಲ್ಲಿದ್ದ, ಆಳುವವರ ಕೆಂಗಣ್ಣಿಗೆ ತುತ್ತಾಗಿ ನಾಟಕ ಪ್ರದರ್ಶನವಾಗುತ್ತಿರುವಾಗಲೇ ಕೊಲೆಯಾಗಿ ಹೋದ ಸಫ್ದರ್ ಹಷ್ಮಿ ಅವರ ಕುರಿತ ಕೃತಿಯನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.

ಬೆಂಗಳೂರು, ದೆಹಲಿ, ಮುಂಬೈ ಒಂದು ಕೊಂಡಿಯಾಗಿ ಬೆಸೆದುಕೊಂಡು ಜಾಲತಾಣದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

‘ಕ್ರಿಯಾ ಮಾಧ್ಯಮ’ ಹಾಗೂ ‘ಸಮುದಾಯ’ ಜಾಲ ತಾಣದಲ್ಲಿ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಖ್ಯಾತ ನಟ, ರಂಗಕರ್ಮಿ ನಾಸಿರುದ್ದೀನ್ ಶಾ ಅವರು ಮುಂಬೈನಲ್ಲಿ ಕೃತಿಯನ್ನು ಬಿಡುಗಡೆ ಮಾಡಿದರು.

ದೆಹಲಿಯಲ್ಲಿ ಕೃತಿಕಾರ ಸುಧನ್ವ ದೇಶಪಾಂಡೆ ಹಾಗೂ ಖ್ಯಾತ ರಂಗಕರ್ಮಿ, ಜನಮ್ ಸ್ಥಾಪಕರಲ್ಲೊಬ್ಬರಾದ ಹಾಗೂ ಸ್ಫದರ್ ಹಷ್ಮಿ ಅವರ ಪತ್ನಿ ಮಲಯಾಶ್ರೀ ಹಷ್ಮಿ ಅವರು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಕೃತಿಯ ಅನುವಾದಕರಾದ ಎಂ ಜಿ ವೆಂಕಟೇಶ್ ಹಾಗೂ ನಟ ಕೆ ಎಸ್ ಅಚ್ಯುತಕುಮಾರ್ ಪಾಲ್ಗೊಂಡಿದ್ದರು.

ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ ಕಾರ್ಯಕ್ರಮ ನಿರ್ವಹಿಸಿದರು.

‍ಲೇಖಕರು avadhi

October 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: