-ಗೋಪಾಲ ತ್ರಾಸಿ
ಅಮೃತಕಾಲದಲ್ಲಿ….!!
ಸತ್ಯದ ಕತ್ತು ಹಿಚುಕುವುದು –
ಸುಳ್ಳಿನ ಧರ್ಮ
ಸತ್ತವರಂತೆ ಬದುಕುವುದಕ್ಕಿಂತ ಸಾವೇ ಲೇಸು-
ಸಿದ್ಧಾಂತ ಕರ್ಮ
ಪ್ರಾಣ ತ್ಯಾಗ ! ಯಾರಿಗಾಗಿ, ಯಾಕಾಗಿ?
ಸರ್ಕಾರ ಹೊಣೆ ?! ಛೇಛೇ !!
ಸತ್ತ ಮಕ್ಕಳ ಹೆತ್ತವರಲ್ಲಿ ಕೇಳಿ –
‘ ನಮ್ಮ ಮಗುವಿನದ್ದೆ ತಪ್ಪು, ತಿಳುವಳಿಕೆಯಿಲ್ಲದ ವಯಸ್ಸು-
ವಿಧಿ ಬರಹವೇ ಅಷ್ಟು’
ಯಾರು ಯಾರನ್ನು ಕೊಂದರೂ ,ಕೊಲ್ಲಲು ಹೊಂಚು ಹಾಕಿದರೂ-
ಸತ್ತವರು, ಸಾಯುವವರು ಹೇಗೂ ಮುಂದೊಮ್ಮೆ
ಸಾಯುವುದು ಸತ್ಯ
ಇದ್ದವರು ಲೊಚಗುಡುವುದು, ಭಾಷಣದಲ್ಲಿ ಉದ್ಧರಿಸುವುದು
ಫೋಟೊಗೆ ಹಾಕಿದ ಹೂಹಾರದಂತೆ ಅಲ್ಪಾಯಿಷಿ !
ಪಕ್ಷಭೇದವಿಲ್ಲದೆ ಆಡಳಿತಕ್ಕೆ –
ಪ್ರಶ್ನಿಸುವವರು ಬದುಕಿರಬಾರದು ಸತ್ತಂತೆಯೂ ಸಹ !
‘ನಾನ್ಯಾಕೆ ಕೊಂದೆ?’ ಆ ಕಾಲ ಮುಗಿಯಿತು
ಈಗೇನಿದ್ದರೂ ಅಮೃತಕಾಲದಲ್ಲಿ –
‘ನಾನೇಕೆ ಕೊಲ್ಲುವೆ‘ !






“ನಮ್ಮ ಹುಡುಗನದೇ ತಪ್ಪು, ಅವನ ಹಣೆಬರಹವೇ ಅಸ್ತಿತ್ತು ಎಲ್ಲವೂ ವಿಧಿಯ ಆಟ. ”
ಗೋಪಾಲತ್ರ ಶ್ರೀ ಅವರ ಕವಿತೆ ಈ ಸಾಲುಗಳು *ಕರ್ಮ ರಿಟರ್ನ್ಸ್”
ಸಿದ್ಧಾಂತ ಪ್ರತಿಪಾದಿಸುವ ಇಂದಿನ ಪ್ರಭುತ್ವಕ್ಕೆ ಚಾಟಿ ಏಟು ಬೀಸುವಂತೆ ಇವೆ.
ಕಾಲಮಾನಕ್ಕೆ ಸೆಡ್ಡು ಹೊಡೆಯುವ ಕವಿತೆ ಬರೆಯುವ ಕವಿ ನಿಜವಾಗಲೂ ಬಂಡಾಯಗಾರ ಗೋಪಾಲತ್ರ ಶ್ರೀ ಅವರಿಗೆ ಅಭಿನಂದನೆಗಳು.
ಡಿ ಎಂ ನದಾಫ್ ಆಫ್ಜಲ್ಪುರ