-ಗೋಪಾಲ ತ್ರಾಸಿ
ಅಮೃತಕಾಲದಲ್ಲಿ….!!
ಸತ್ಯದ ಕತ್ತು ಹಿಚುಕುವುದು –
ಸುಳ್ಳಿನ ಧರ್ಮ
ಸತ್ತವರಂತೆ ಬದುಕುವುದಕ್ಕಿಂತ ಸಾವೇ ಲೇಸು-
ಸಿದ್ಧಾಂತ ಕರ್ಮ
ಪ್ರಾಣ ತ್ಯಾಗ ! ಯಾರಿಗಾಗಿ, ಯಾಕಾಗಿ?
ಸರ್ಕಾರ ಹೊಣೆ ?! ಛೇಛೇ !!
ಸತ್ತ ಮಕ್ಕಳ ಹೆತ್ತವರಲ್ಲಿ ಕೇಳಿ –
‘ ನಮ್ಮ ಮಗುವಿನದ್ದೆ ತಪ್ಪು, ತಿಳುವಳಿಕೆಯಿಲ್ಲದ ವಯಸ್ಸು-
ವಿಧಿ ಬರಹವೇ ಅಷ್ಟು’
ಯಾರು ಯಾರನ್ನು ಕೊಂದರೂ ,ಕೊಲ್ಲಲು ಹೊಂಚು ಹಾಕಿದರೂ-
ಸತ್ತವರು, ಸಾಯುವವರು ಹೇಗೂ ಮುಂದೊಮ್ಮೆ
ಸಾಯುವುದು ಸತ್ಯ
ಇದ್ದವರು ಲೊಚಗುಡುವುದು, ಭಾಷಣದಲ್ಲಿ ಉದ್ಧರಿಸುವುದು
ಫೋಟೊಗೆ ಹಾಕಿದ ಹೂಹಾರದಂತೆ ಅಲ್ಪಾಯಿಷಿ !
ಪಕ್ಷಭೇದವಿಲ್ಲದೆ ಆಡಳಿತಕ್ಕೆ –
ಪ್ರಶ್ನಿಸುವವರು ಬದುಕಿರಬಾರದು ಸತ್ತಂತೆಯೂ ಸಹ !
‘ನಾನ್ಯಾಕೆ ಕೊಂದೆ?’ ಆ ಕಾಲ ಮುಗಿಯಿತು
ಈಗೇನಿದ್ದರೂ ಅಮೃತಕಾಲದಲ್ಲಿ –
‘ನಾನೇಕೆ ಕೊಲ್ಲುವೆ‘ !






0 Comments