ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನ್ಯಾಕೆ ಕೊಂದೆ?

-ಗೋಪಾಲ ತ್ರಾಸಿ

ಅಮೃತಕಾಲದಲ್ಲಿ….!!

ಸತ್ಯದ ಕತ್ತು ಹಿಚುಕುವುದು –
ಸುಳ್ಳಿನ ಧರ್ಮ
ಸತ್ತವರಂತೆ ಬದುಕುವುದಕ್ಕಿಂತ ಸಾವೇ ಲೇಸು-
ಸಿದ್ಧಾಂತ ಕರ್ಮ

ಪ್ರಾಣ ತ್ಯಾಗ ! ಯಾರಿಗಾಗಿ, ಯಾಕಾಗಿ?
ಸರ್ಕಾರ ಹೊಣೆ ?! ಛೇಛೇ !!
ಸತ್ತ ಮಕ್ಕಳ ಹೆತ್ತವರಲ್ಲಿ ಕೇಳಿ –
‘ ನಮ್ಮ ಮಗುವಿನದ್ದೆ ತಪ್ಪು, ತಿಳುವಳಿಕೆಯಿಲ್ಲದ ವಯಸ್ಸು-
ವಿಧಿ ಬರಹವೇ ಅಷ್ಟು’

ಯಾರು ಯಾರನ್ನು ಕೊಂದರೂ ,ಕೊಲ್ಲಲು ಹೊಂಚು ಹಾಕಿದರೂ-
ಸತ್ತವರು, ಸಾಯುವವರು ಹೇಗೂ ಮುಂದೊಮ್ಮೆ
ಸಾಯುವುದು ಸತ್ಯ
ಇದ್ದವರು ಲೊಚಗುಡುವುದು, ಭಾಷಣದಲ್ಲಿ ಉದ್ಧರಿಸುವುದು
ಫೋಟೊಗೆ ಹಾಕಿದ ಹೂಹಾರದಂತೆ ಅಲ್ಪಾಯಿಷಿ !

ಪಕ್ಷಭೇದವಿಲ್ಲದೆ ಆಡಳಿತಕ್ಕೆ –
ಪ್ರಶ್ನಿಸುವವರು ಬದುಕಿರಬಾರದು ಸತ್ತಂತೆಯೂ ಸಹ !

‘ನಾನ್ಯಾಕೆ ಕೊಂದೆ?’ ಆ ಕಾಲ ಮುಗಿಯಿತು
ಈಗೇನಿದ್ದರೂ ಅಮೃತಕಾಲದಲ್ಲಿ –
‘ನಾನೇಕೆ ಕೊಲ್ಲುವೆ‘ !

‍ಲೇಖಕರು Admin

17 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading