ನಾಗರಾಜ್ ಹರಪನಹಳ್ಳಿ ಹೊಸ ಕವಿತೆ- ನೀನು ನನ್ನ ಏಕವಚನ

ನಾಗರಾಜ್ ಹರಪನಹಳ್ಳಿ

ನೀನು ಪರಿಚಯವಾದುದು ಬಹುವಚನದಿಂದ

ನಂತರ ಒಂದೊಂದೇ ಹೆಜ್ಜೆ
ತಿಂಗಳು ತಿಂಗಳು ಉರುಳಲು
ಗೆಳೆತನ ಬಂಧುತ್ವವಾಗಿ
ತದ ನಂತರ ಅಪ್ತವಾಗಿ
ಏಕವಚನವಾದುದು ಸೋಜಿಗ

ಮೊದಲು  ಸ್ವಾಗತ ಪೀಠಿಕೆ ಪ್ರಸ್ತಾವನೆ ಮುಗಿದ ಮೇಲೆ ಕವಿ ಪರಿಚಯ
ನಂತರ ಕಾವ್ಯ ವಾಚನ
ವಿಮರ್ಶೆ, ಅರ್ಥವ್ಯಾಖ್ಯಾನ
ಕಠಿಣಪದಗಳ ಅರ್ಥ ಬಿಡಿಸಲಾಗಿ
ಅಡಿ ಟಿಪ್ಪಣಿ, ಸಂದರ್ಭ ಸ್ವಾರಸ್ಯ ದಾಟಿದವು
ಕತೆ ಬೆಳೆದು ಕಾದಂಬರಿಯಾಗಿ ಬೆಳೆಯಿತು ಬದುಕು

ಬಾಹ್ಯ ಸಾಕ್ಷ್ಯಗಳ ನಾಶವೂ ಆಯಿತು
ಆದರೆ ಆರೋಪಿಗಳು
ಕಾಲದ ಜಠರಕ್ಕೆ ಸಿಕ್ಕಿ ಗೊಬ್ಬರವಾಗಿದ್ದರು

ನಾವು  ಮಾತ್ರ
ಏಕವಚನದಿಂದ ಮೌನಕ್ಕೆ
ಪಿಸುಮಾತಿಗೆ ಆಗಾಗ ಜಾರುತ್ತೇವೆ;
ಮೌನದಿಂದ ಪ್ರೇಮಕ್ಕೆ ಹೊಸ ಭಾಷ್ಯ ಬರೆಯುತ್ತಲೇ ಇದ್ದೇವೆ

ನಾನು ನಿನಗೆ ಏಕವಚನ
ನೀನು ನನಗೆ ವಚನ
ಪ್ರತಿ ಹುಣ್ಣಿಮೆ ನಮಗಾಗಿ ಬರುತ್ತದೆ
ಮುಂಗಾರು ಪುಟಿದೆದ್ದು ಕುಣಿಯುತ್ತಲೇ
ಇರುತ್ತದೆ‌

‍ಲೇಖಕರು avadhi

August 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: