ಜಯಶ್ರೀ ಸುಕಾಲೆ
ಬೆಳ್ಳನೆ ಬೆಳಗಾಗಿತ್ತು; ಮಲ್ಲಿಗೆ ರಾಶಿಯಾಗಿ ಬೆಳಕು
ಹರಡಿತ್ತು ಸೇತುವೆ ಕೆಳಗೆ ತುಂಗಭದ್ರೆಯ ಥಳಕು.
ಅದೆಂಥ ಮೋಹಕ ಗತ್ತು ನವಿಲೇ ಸೇತುವೆ ಮೇಲೆ
ಬೆಳ್ಳಕ್ಕಿಯ ಜೊತೆ ವಾಯುವಿಹಾರದ ನಡಗೆ ಕಲೆ.
ಕವಿ ಅದ ನೋಡಿದನು; ಮರುಳಾದನು ಅಡಿಗಡಿಗೆ
ನವಿಲೇ ನವಿಲೇ ಬಿಸಿಯಾಯಿತು ಕವಿಯ ಗುಂಡಿಗೆ.
ಬೆಳ್ಳಕ್ಕಿಗೊ ನವಿಲ ಜೊತೆಗೆ ಹೆಜ್ಜೆ ಹಾಕುವ ಆನಂದ
ನವಿಲಿಗೊ ಕವಿಯ ಒಳಗೇ ನಡೆದಂಥ ಭಾವಾನಂದ.
ನವಿಲಿನ ಆತ್ಮಸಾಂಗತ್ಯಕ್ಕಾಗಿ ಹಾ ತೊರೆಯುವ ಕವಿ
ಪಡೆಯುವ ಆಸೆ ಇದ್ದರೂ ಆಗುವುದಿಲ್ಲ ಆತ ಭವಿ.
ಕವಿಯ ಮನಸು ಸೋತಿದ;ೆ ನವಿಲ ಹೆಮ್ಮೆ ಗೆದ್ದಿದೆ
ಜನಾರಣ್ಯದ ಕಾನೂನು ಕವಿ ನವಿಲ ಮಧ್ಯೆ ಬಿದ್ದಿದೆ.
ನವಿಲ ಒಡೆಯ ಬಂದೇ ಬಿಟ್ಟ; ನವಿಲ ಹಿಡಿದು ನಿಂತ
ಕವಿಯು ರಸ್ತೆ ಮಧ್ಯೆ ಹಾಗೇ ನಿಂತು ಆಗಿಬಿಟ್ಟ ಸಂತ.
ನವಿಲು ಹಾರಿತು ಮನದಲ್ಲೇ ಕವಿಯ ಕಡೆಗೆ ಒಡೆಯಾ
ಅದರಾತ್ಮ ಕವಿಯೆಡೆಗೆ ನೀನೆಷ್ಟು ಕಟ್ಟಿದರೂ ಗೋಡೆಯಾ.
ಈ ರಂಗುರಂಗಿನ ಕವಿತೆಯ ಭಾವ ಮೂಡಿಸಿದ ರಂಗ
ಮುಗ್ಧಳಾಗಿ ಕವನ ಬರೆದ ಜಯದೇವಿ ಆದಳು ದಂಗ.
0 ಪ್ರತಿಕ್ರಿಯೆಗಳು