ನಭಾ ಒಕ್ಕುಂದ ಹೊಸ ಕವಿತೆ- ಚರಿತ್ರೆ, ಮರುಕಳಿಸುವುದಲ್ಲ

ನಭಾ ಒಕ್ಕುಂದ

ದಿನದಿನವೂ ತಾನಿರುವಲ್ಲಿಯೇ

ಜೀವಗಳು ಬಂದು ಆಹಾರವಾಗಬೇಕೆಂದ

ಆ ಕಾಡು ನಿಯಮವನಿನ್ನು ಮರೆಯುವ

ಅಲ್ಲಿ ಹಸಿವೆಂಬ ಹೆಬ್ಬಾವು ಒಡಲು ನುಂಗುತ್ತಿತ್ತು

ಬೇಟೆಯಾಡದ ಆಲಸ್ಯ, ರಾಜತ್ವದ ಅಹಂಕಾರವಿತ್ತು

ಒಂದು ಪುಟ್ಟ ಮೊಲ ಸಾಕಾಯಿತು

ಹಾದಿಯಲಿ ಹಾಳು ಬಾವಿಯೊಂದು ಒದಗಿತು,

ನೆರಳನ್ನೂ ನೆರಳೆಂದು ತಿಳಿಯಲಾಗದ ಸಿಂಹ

ತನ್ನ ಅಹಮ್ಮಿನ ಪ್ರಪಾತಕೆ ನೆಗೆಯಿತು

ಪ್ರತಿರೋಧದ ಸಣ್ಣ ಪಲುಕಿನಲೂ ಗೆಲುವಾಯಿತು.

ಆ ದೂರದ ಏಳು ಸಮುದ್ರದಾಚೆ

ಹೆಣ್ಣುಬಾಕನಿದ್ದನಂತೊಬ್ಬ

ದಿನಕ್ಕೊಬ್ಬರಂತೆ ಮುಕ್ಕುತ್ತಿದ್ದವ

ಶವವಾಗಬೇಕಿದ್ದ ಶಹಜಾದೆ ಕಥೆ ಹೇಳಿದಳು

ಕಥೆಯಲ್ಲೇ ಅವನ ತೂಗಿದಳು, ಕಥೆಯಾದಳು

ಅನ್ಯಾಯವನು ಕಲೆ ಗೆದ್ದ ಕಥೆಯೊಂದು

ಲೋಕ ಲೋಕಾಂತರಕೆ ಚಾಚಿ, ಕಣ್ಣೊರೆಸಿತು.

ಇಂದಿಲ್ಲಿ,

ತಾಯ ಮಡಿಲು, ತಂದೆಯ ತೋಳು

ಗುರುವಿನ ಬೆರಳು, ಸ್ನೇಹದ ಮುಗುಳು

ಅಧಿಕಾರ ಪೀಠಗಳು, ಮಠ ಮಾನ್ಯಗಳು

ಅನಾಥ ಬಾಲೆಯರ ಪರಚಿ ಗೀರಿ ಹುದುಲಿಗೆಸೆದಿವೆ

ಕಾನೂನು ಸಾಕ್ಷಿ ಹುಡುಕುತ್ತ ಆಕಳಿಸುತ್ತಿದೆ

ಅದಕ್ಕೇ ಮತ್ತೆ, ಮೊಲದ ಜಾಣ್ಮೆ

ಶಹಜಾದೆಯ ಸ್ಥೈರ್ಯ ಮೊಗೆದುಕೊಳ್ಳಬೇಕಿದೆ

ಚರಿತ್ರೆ , ಮರುಕಳಿಸುವುದಲ್ಲ

ಸದಾ ನಡೆಯುತ್ತಿರುವುದು

‍ಲೇಖಕರು avadhi

September 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: