ನನ್ನ ಕವಿತೆ ಇಲ್ಲಿಲ್ಲ

ಗಣೇಶ್ ಅದ್ಯಪಾಡಿ

ಮಂಗಳೂರಿನ ಅದೇ
ಹಳೆಯ ರಸ್ತೆಯ ಹೊಸರೂಪ
ಬಾಯ್ಬಿರಿದ ಫುಟ್ ಪಾತ್‌ನ
ಉದ್ದಕ್ಕೂ ಯಸ್ ಯಸ್
ಎನ್ನುವ ದನಿಗೆ ಬಾಯಗಲಿಸಿ
ನೈಟಿ ಖರೀದಿಸುವ ಹೆಣ್ಮನಗಳು ..

ಅದೇ ಕಾಂಕ್ರೀಟ್ ಗಿರಿ
ಶಿಖರಗಳ ನಡುವೆ
ಒಂದು ಚೂರು ಹೊಲಸು
ಗಿಜಿಗಿಡುವ ರಸ್ತೆಗಳಲ್ಲಿ
ಲಕ್ಷಗಟ್ಟಲೆ ಹಣದ ಓಡಾಟ

ಕಾಲು ಮುರಿದ
ಬೆನ್ನು ಮೂಳೆ ಮುರಿದ
ಕರುಳು ಕಡಿದ
ಮುದುಡಿ ಬಾಡಿದ
ಅದೆಷ್ಟೊ ಉಸಿರುಗಳು
ಕೈಚಾಚುತ್ತಿವೆ …
ನಾನು ನಿರ್ಭಾವಿಯಾಗಿ ಸಾಗುತ್ತೇನೆ..

ಸಿಮೆಂಟ್ ಗೋಡೆಗಳ
ಮೇಲೆ ಕಾಲಿಡುತ್ತಾ ಸಾಗುವಾಗ
ಅದೆಷ್ಟೊ ಮುಖವಾಡಗಳು
ಹೌದು ಮುಖವಾಡಗಳೇ ‌.!!

ನಗುವುದು
ಅಳುವುದು
ಕೆಲವು ಒಂಚೂರು ಭಾವುಕ
ಕೆಲವು ಸತ್ತ ಭಾವದ ಮುಖ
ಒಂದಿಷ್ಟು ಕಾಂತಿಯ ಮುಖಗಳು
ಒಂದಿಷ್ಟು ಬೆವರು ಹರಿಯುವ ವದನಗಳು
ವಿಧ ವಿಧವಾದವು
ಅದೋ ಎಷ್ಟೊಂದು ಕವಿತೆಗಳು
ಈ ಮಾರ್ಕೆಟಿನ ರೋಡಿನಲಿ
ಯಾವುದೂ ಮನಸ್ಸ ಸೇರುವುದಲ್ಲ ..!!

ನಾನು ನನ್ನ ಕವಿತೆಯನ್ನು
ಹುಡುಕಿ ಕಡಲ ದಾರಿಯಲ್ಲಿ ಸಾಗುತ್ತಿದ್ದೇನೆ ..
ಯಾಕೆಂದರೆ ನನ್ನ ಕವಿತೆ ಇಲ್ಲಿಲ್ಲ ..!!!

‍ಲೇಖಕರು Avadhi Admin

April 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: