ಇಮ್ತಿಯಾಜ್ ಶಿರಸಂಗಿ
ಬುಲ್ದೊಸರ್ ನ
ಹಲ್ಲುಗಳು
ಮರಗುತ್ತವೆ.
ಸತ್ತವರಿಗೆ ಕುಣಿ ತೋಡುವ
ಬದಲು ಬದುಕಿದವರ
ಬಾಳನ್ನೇ ಕುಣಿ ಯಾಗಿಸುತ್ತಿರುವ
ಬಗೆ ಯೋಚಿಸಿ.
ಹೊಲಸು ರಾಜಕಾರಣದ
ಧರ್ಮ ದಂಗಲ್ನಲ್ಲಿ
ನಿಯಮಗಳ ಚೆಂಡು,
ಈ ಕಡೆಯಿಂದ ಆ ಕಡೆ
ಆ ಕಡೆಯಿಂದ ಈ ಕಡೆ
ಒದಿಸಿಕೊಂಡು, ಕೊನೆಗೆ
ಬಡವನ ಹೊಸ್ತಿಲಿಗೆ ಬರತ್ತದೆ
ಸುಂಕ ಕೇಳಲು.
ತಮ್ಮ ಸ್ವಾರ್ಥದ ಹರಕತ್ತಿನ
ವಕಾಲತ್ತಿಗಾಗಿ
ನಡುರಾತ್ರಿಯಲ್ಲೂ ನ್ಯಾಯದ
ಕದ ತಟ್ಟುವವರಿಗೆ.
ಆದೇಶದ ಪ್ರತಿ
ತಲುಪಲಿಲ್ಲವಂತೆ ಕೂಗಳತೆಯ
ದೂರವಿದ್ದರೂ..
ಪವಿತ್ರ ರಂಜಾನ್ ತಿಂಗಳಲ್ಲಿ
ಅಲ್ಲಾ:….! ನಿನ್ನಲ್ಲಿ
ನಾ ಬೇಡಿಕೊಳ್ಳುವುದಿಷ್ಟೇ
ನಿಷ್ಪಕ್ಷವಾಗಿ:
ಧರ್ಮದ ಹೆಸರಿನಲ್ಲಿ
ಶಾಂತಿ ಕೆಡಿಸುತ್ತಿರುವವರನ್ನು
ಶಿಕ್ಷಿಸು …
ಕಲ್ಲು ಎಸೆದವನ,
ಕಲ್ಲಂಗಡಿ ಒಡೆದವ,
ಮನೆ ಕೆಡವಿದವನ
ಮನದಲ್ಲಿ ದ್ವೇಷ ಕಳೆದು
ಪ್ರೀತಿ ಹುಟ್ಟಿಸು….
ಚೆನ್ನಾಗಿದೆ