‘ನನ್ನದೊಂದು ಬೇಡಿಕೆ’

ಇಮ್ತಿಯಾಜ್ ಶಿರಸಂಗಿ

ಬುಲ್ದೊಸರ್ ನ
ಹಲ್ಲುಗಳು
ಮರಗುತ್ತವೆ.
ಸತ್ತವರಿಗೆ ಕುಣಿ ತೋಡುವ
ಬದಲು ಬದುಕಿದವರ
ಬಾಳನ್ನೇ ಕುಣಿ ಯಾಗಿಸುತ್ತಿರುವ
ಬಗೆ ಯೋಚಿಸಿ.

ಹೊಲಸು ರಾಜಕಾರಣದ
ಧರ್ಮ ದಂಗಲ್ನಲ್ಲಿ
ನಿಯಮಗಳ ಚೆಂಡು,
ಈ ಕಡೆಯಿಂದ ಆ ಕಡೆ

ಆ ಕಡೆಯಿಂದ ಈ ಕಡೆ
ಒದಿಸಿಕೊಂಡು, ಕೊನೆಗೆ
ಬಡವನ ಹೊಸ್ತಿಲಿಗೆ ಬರತ್ತದೆ
ಸುಂಕ ಕೇಳಲು.

ತಮ್ಮ ಸ್ವಾರ್ಥದ ಹರಕತ್ತಿನ
ವಕಾಲತ್ತಿಗಾಗಿ
ನಡುರಾತ್ರಿಯಲ್ಲೂ ನ್ಯಾಯದ
ಕದ ತಟ್ಟುವವರಿಗೆ.
ಆದೇಶದ ಪ್ರತಿ
ತಲುಪಲಿಲ್ಲವಂತೆ ಕೂಗಳತೆಯ
ದೂರವಿದ್ದರೂ..

ಪವಿತ್ರ ರಂಜಾನ್ ತಿಂಗಳಲ್ಲಿ
ಅಲ್ಲಾ:….! ನಿನ್ನಲ್ಲಿ
ನಾ ಬೇಡಿಕೊಳ್ಳುವುದಿಷ್ಟೇ
ನಿಷ್ಪಕ್ಷವಾಗಿ:
ಧರ್ಮದ ಹೆಸರಿನಲ್ಲಿ
ಶಾಂತಿ ಕೆಡಿಸುತ್ತಿರುವವರನ್ನು
ಶಿಕ್ಷಿಸು …

ಕಲ್ಲು ಎಸೆದವನ,
ಕಲ್ಲಂಗಡಿ ಒಡೆದವ,
ಮನೆ ಕೆಡವಿದವನ
ಮನದಲ್ಲಿ ದ್ವೇಷ ಕಳೆದು
ಪ್ರೀತಿ ಹುಟ್ಟಿಸು….

‍ಲೇಖಕರು Admin

May 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಣೆ

ಆಣೆ

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: