ದೇವು ಮಾಕೊಂಡ ಕವಿತೆ- ಆಫ್ರಿಕಾದ ಚಿರತೆ..

ದೇವು ಮಾಕೊಂಡ

ಕಾಡಿನಲ್ಲಿ ರಾಜನೊಬ್ಬ
ಶೋಕಿಗಾಗಿ ಅಲೆದಾಡಿ ಹಿಡಿದ
ಚಿರತೆಯೊಂದು ಮರ, ಕಾಡು ತಿರುಗಿ ಮಲಗಿತ್ತು
ಮೂರೇ ಮೂರು ಮರಿಗಳ ಜನ್ಮವಿತ್ತು

ಆಹಾ
ಮೈತುಂಬಾ ಹೊಳಪುಳ್ಳ ಕಣ್ಣುಗಳು
ದೇವಲೋಕದ ದಯಾ ನಿಧಿ ಬಣ್ಣಗಳು
ಕಾಡಿಗೆ ಕಾಡೇ ಬೆರಗಾಗಿತ್ತು
ಚೆಲುವಿಗೆ ಅದರ ನಿಲುವಿಗೆ

ಎತ್ತರದ ನಿಲುವು
ಜಗದಾಳುವ ಕಣ್ಣು
ಯಾರಿಗೆ ಕಾಯುತ್ತಿತ್ತು ಒಲವಿನ ಕಾಡು ಮರೆತು?

ವಕ್ರಗಾಳಿ ನೂಕುತಿತ್ತು ಅದರ ಎದೆಯ ಒಳಸುಳಿಗೆ
ಬೇಟೆ ದಾಟಿ ಬಂದವನ ಕೈಗಳಿಗೂ
ನಡುಕ ಸುರವಿಟ್ಟುಕೊಂಡಾಗ
ಹೋಮದ ಹೊಗೆಯಾದರೂ ಏನು ಮಾಡಿತು?
ಎಷ್ಟೊಂದು ಆಳಿದ ಚೆಲುವ,
ಉರ್ಧ್ವಮುಖ ಬೀಸಿದ ಚಂಚಲ ಗಾಳಿ
ಆತ್ಮ ನಲುಗಿತು ಮೇಲೆ
ಕೆಳಗೆ

ಆಫ್ರಿಕಾದ ಕಾಡು,
ಇಂಡಿಯಾದ ಗಾಳಿ
ಬೇಟೆಯಾಗಿ ನಿಂತ ಬೇಟೆಗಾರ
ಸಹರಾ ಕಾಡು, ಥಾರ್ ಮರಭೂಮಿ,
ಬಿಸಿಲ ಲೆಕ್ಕಿಸದೆ ಹಲ್ಲುಗೀರಿ ನಿಂತ
ಎರಡು ಬದಿಯ ವಿರಳಾತಿವಿರಳ
ಪೋಷಕ ಮರ ಗಿಡ, ವ್ಯಘ್ರ ನಗು

ಆಡಳಿತ ಪ್ರಜಾಸೇವೆ ನರ್ತಿಸುತ್ತಿದ್ದವು
ಸೆರೆ ಹಿಡಿದ ಕ್ಯಾಮೆರಾದಲ್ಲಿ
ಚಿರತೆಯ ಪಾತ್ರವೇನಿಗ ಎಂದವನಿಗೊಂದು
ಚುಟುಕು ಉತ್ತರ
ವಿಚ್ಛೇದಿತಗೊಂಡವರ ಪರಸ್ಪರ ಭ್ರೂಣ ವರ್ಗಾವಣೆ,
ಅಂತಃರ ತಳಿಗಳ ಬಾಣಂತಿಯ ಪ್ರಸವ ಪ್ರಯೋಗ

ಕಾಡಿನಲ್ಲಿ ರಾಜನೊಬ್ಬ
ಶೋಕಿಗಾಗಿ ಅಲೆದಾಡಿ ಹಿಡಿದ
ಚಿರತೆಯೊಂದು ಮರ, ಕಾಡು ತಿರುಗಿ ಮಲಗಿತ್ತು
ಮೂರೇ ಮೂರು ಮರಿಗಳ ಜನ್ಮವಿತ್ತು

‍ಲೇಖಕರು avadhi

May 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: