ಆ ಘಳಿಗೆ
ಆನಂದ ಬೋವಿ
ತುಟಿಯ ತೊಟ್ಟಿನಲಿ
ಕಚ್ಚಿ ಹಿಡಿದಿದ್ದೇನೆ
ನೀ
ಎದ್ದು ಹೋದ ಘಳಿಗೆಯನ್ನ
ಬೆತ್ತಲೆದೆಯ ತುಂಬಿನಲಿ
ತೊಟ್ಟಿಕ್ಕುತ್ತಿದೆ
ನೀ
ಮದರ್ಿಸಿದ ಗೆರೆ
ತೊಡೆಯ ನರಗಳಲ್ಲಿ
ಆಯಾಸಗೊಂಡಿದೆ
ನೀ
ರಂಬಿಸಿದ ನೋವು
ಕೂದಲೆಳೆಯ ಬೇರು
ನರಳಿದೆ
ನೀ
ತಟ್ಟಿದ ಪೆಟ್ಟಿಗೆ
ಕ್ರಾಂತಿಯ ವಿಭಜನೆ
ಐಕ್ಯಗೊಂಡಿದೆ
ನೀ
ಗುರಿಯಿಟ್ಟ ದಾಳಿಗೆ
ಇಂಗಬೇಕೆಂದರೆ
ನೆಲವಾಗಲಿಲ್ಲ
ನೀ
ಹರಿಯಲು ಇಲ್ಲ
ಕಟ್ಟೆ ಕಟ್ಟುವೆ
ದಿಕ್ಕು ತಪ್ಪಿ
ನೀ
ಫಕೀರನಾಗಲು.
super lines
ಪದ್ಯ ರಸಾಕರ್ಷಣೆಯಿಂದ ಕೂಡಿದ್ದು ಚೆನ್ನಾಗಿದೆ.