ತಾರಿಣಿ ಶುಭದಾಯಿನಿಗೆ ಕಡೆಂಗೋಡ್ಲು ಪ್ರಶಸ್ತಿ


ಚಿತ್ರದುರ್ಗ ಸರಕಾರಿ ಕಲಾ ಕಾಲೇಜಿನ ಇಂಗ್ಲಿಷ್ ಸಹಪ್ರಾಧ್ಯಾಪಿಕೆ ಆರ್. ತಾರಿಣಿ ಶುಭದಾಯಿನಿ ಅವರ `ಪೂರ್ವಭಾಷಿ’ ಅಪ್ರಕಟಿತ ಕವನ ಸಂಕಲನಕ್ಕೆ 2013ರ ಸಾಲಿನ ಕಡೆಂಗೋಡ್ಲು ಪ್ರಶಸ್ತಿ ಘೋಷಿಸಲಾಗಿದೆ ಎಂದು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ತಾರಿಣಿ ಈಗಾಗಲೇ ಗ್ರಂಥಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಪ್ರಕಟಿತ ಕವನ ಸಂಕಲನಗಳು- `ತೋಡಿ ರಾಗ’, `ಚಿತ್ತಗ್ಲಾನಿಯ ಮಾತು’ ಹಾಗೂ `ಒಂದು ತುಂಡು ಬೆಲ್ಲ’. ವಿಮರ್ಶೆ ಕೃತಿ- `ಹೆಡೆಯಂತಾಡುವ ಸೊಡರು’ ಮತ್ತು `ಗಳಿಗೆ ಬಟ್ಟಲು’. ವಿಚಾರ ಸಾಹಿತ್ಯ- `ನಿರ್ವಸಾಹತೀಕರಣ’, ಸ್ತ್ರೀ ಶಿಕ್ಷಣ- `ಚರಿತ್ರೆಯ ಹೆಜ್ಜೆಗಳು’.
ತಾರಿಣಿ ಅವರಿಗೆ ಶುಭಾಶಯಗಳು ಹಾಗೂ ಇನ್ನಷ್ಟು ಪ್ರಶಸ್ತಿಗಳು ಅರಸಿಬರಲಿ ಎಂದು ಹಾರೈಕೆ.
-ಕಿರಣ್ ಮಂಜನಬೈಲು

‍ಲೇಖಕರು G

June 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

17 ಪ್ರತಿಕ್ರಿಯೆಗಳು

  1. kum.veerabhadrappa

    ತಾರಿಣಿ ಶುಭದಾಯಿನಿಯವರಿಗೆ ಹಾರ್ದಿಕ ಅಭಿನಂದನೆಗಳು
    ಕುಂವೀ

    ಪ್ರತಿಕ್ರಿಯೆ
  2. ಹನುಮಂತ ಹಾಲಿಗೇರಿ

    ಅಭಿನಂದನೆ ಮೇಡಂ, ಖುಷಿಯಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: