ಡಿ ಬಿ ರಜಿಯಾ ಅವರ ಹನಿಗವನಗಳ ಸಂಕಲನ ‘ದೀವಟಿಗೆ’ ಅವರ ಮನೆಯಂಗಳದಲ್ಲಿ ಬಿಡುಗಡೆ ಮಾಡಲಾಯಿತು.
ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಅವರು ಪುಸ್ತಕ ಬಿಡುಗಡೆ ಮಾಡಿದರು.
ಹಿರಿಯ ಕವಯತ್ರಿ ಸ.ಉಷಾ, ಕವಯತ್ರಿ ಅಕ್ಷತಾ ಹುಂಚದಕಟ್ಟೆ, ಹಿರಿಯ ಕವಿ ಸತ್ಯನಾರಾಯಣರಾವ್ ಅಣತಿ, ಕವಯತ್ರಿ ಸವಿತಾ ನಾಗಭೂಷಣ, ರಜಿಯಾ ಅವರ ಕುಟುಂಬದವರೆಲ್ಲರೂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲೇಖಕಿ ವಿಜಯಾ ಶ್ರೀಧರ್, ಮಾನಸಾ ಶಿವರಾಮಕೃಷ್ಣ, ಕಿರಣ್ ದೇಸಾಯಿ, ಅಂಬಿಕಾ, ಗೀತಾ ಇವರು ರಜಿಯಾ ಅವರನ್ನು ಅಭಿನಂದಿಸಿ ಸನ್ಮಾನಿಸಿದರು. ರೇಖಾಂಬಾ ಕಾರ್ಯಕ್ರಮ ನಿರೂಪಿಸಿದರು.
0 ಪ್ರತಿಕ್ರಿಯೆಗಳು