ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ. ಸತ್ಯಮಂಗಲ ಮಹಾದೇವ ಅಂಕಣ –ಕವಿ ಬದುಕಿದರೆ ಕವಿತೆ ಬದುಕುತ್ತದೆ

ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನಗಳಲ್ಲಿ ಕನ್ನಡದ ಹಿರಿಮೆಯನ್ನು ಪಸರಿಸಿರುವ ಇವರ ಕವಿತೆಗಳು ವಿವಿಧ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವಾಗಿವೆ.

ಶಿಕ್ಷಕ ಪ್ರಶಸ್ತಿ ವಿಜೇತರಾದ ಇವರು ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ತುಮಕೂರು ಜಿಲ್ಲೆಯವರಾಗಿದ್ದು, ಪ್ರಸ್ತುತ ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನು ಮುಂದೆ ಅವಧಿಯಲ್ಲಿ ಕವಿತೆಗಳನ್ನು ಕುರಿತ ಹೊಸ ಹೊಳಗಿನ’ಬೆಳಕಿನ ಜಾಡು’ ಅಂಕಣದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಅಂಕಣ – 

“ದುಃಖ ಆರದ ನೆಲದಲ್ಲಿ” ಕೃತಿ ಕನ್ನಡದ ನೆಲದ ಹಿರಿಯ ಸಶಕ್ತ ಕವಿ ತತಾಗತ ಪ್ರಜ್ಞೆಯನ್ನು ಜೀವಿಸುವ ಸುಬ್ಬು ಹೊಲೆಯರ್ ಅವರ ಲೇಖನಗಳ ಕೃತಿ. ‘ಜಗತ್ತಿನ ಅತಿದೊಡ್ದ ಪ್ರಾರ್ಥನೆಯೆಂದರೆ ತಾಳ್ಮೆ’ ಎಂಬ ಬುದ್ಧನ ಮಾತಿನೊಂದಿಗೆ ಇವರ ಲೇಖನಗಳ ಪ್ರಸ್ತುತಿ ಆರಂಭವಾಗಿದೆ. ಒಬ್ಬ ಕವಿಯಾಗಿ ಸುಬ್ಬು ಹೊಲೆಯಾರ್ ಅವರು ಸೂಜಿಗಾತ್ರದ ಕೊಳವೆಯೊಳಗಿಂದ ಮನುಷ್ಯನೊಬ್ಬನ ಹಾಡು ಮತ್ತು ಮಳೆ ಬರಲಿ ಲೋಕದ ಎಲ್ಲರ ಮನೆಯ ಮೇಲೆ ಎಂಬ ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ನಂತರ ದುಃಖ ಆರದ ನೆಲದಲ್ಲಿ ಲೇಖನಗಳ ಸಂಗ್ರಹ ಇದು ಅವರ ಮೂರನೇ ಕೃತಿ. ಕಡಿಮೆ ಬರೆದು ಹೆಚ್ಚು ಬದುಕಿನ ಪ್ರೀತಿಯನ್ನು ಹಂಚುವ ವ್ಯಕ್ತಿತ್ವ ಸುಬ್ಬಣ್ಣ ಅವರದು. ಇವರ ಅಂತಃಕರಣ ಅದು ಬುದ್ಧನ ಕಾರುಣ್ಯದ ಮನೆ. ಏಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಕವಿತೆಗಿಂತ ಕವಿ ಬದುಕಿದರೆ ಕವಿತೆ ಬದುಕುತ್ತದೆ ಎನ್ನುವ ಮಾತು ನನ್ನದು. ಕವಿ ಬಾಳಬೇಕು ಆಗ ಕವಿತೆ ತಾನಾಗಿಯೇ ಬಾಳುತ್ತದೆ. ಆದ್ದರಿಂದ ಕವಿಯ ವ್ಯಕ್ತಿತ್ವವನ್ನು ಒಂದಿಷ್ಟು ಚರ್ಚಿಸಿ ಮುಖ್ಯ ವಿಷಯಕ್ಕೆ ಬರುತ್ತೇನೆ.

ಅಸ್ಪೃಷ್ಯತೆಯ ನೋವನ್ನು ಅನುಭವಿಸುತ್ತಿರುವ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯಾಗಲಿ ಆತ ನನ್ನ ಸಂಗಾತಿ ಎನ್ನುವ ಸುಬ್ಬಣ್ಣ ಅವರ ಲೇಖನಗಳ ಕೇಂದ್ರ ಪ್ರಜ್ಣೆ ಅಂಬೇAಡ್ಕರ್ ಅವರ ಮೈತ್ರಿ ಮತ್ತು ಹೋರಾಟ, ಬುದ್ಧನ ಕರುಣೆ, ಬಸವಣ್ಣನ ಸಾಮೂದಾಯಿಕ ಚಿಂತನೆ. ತುಳಿತಕ್ಕೊಳಗಾದವರ, ಅವಮಾನಿತರ, ನೊಂದವರ ಪರವಾದ ಅವರ ಧ್ವನಿ ಯಾವಾಗಲೂ ಕ್ರಿಯಾಶೀಲ. ಮನುಷ್ಯನಾಗದವನು ಕವಿಯಾಗಲಾರ ಎನ್ನುವ ನನ್ನ ಮಾತಿನಲ್ಲಿ ಒಂದು ಸಂವೇದನೆ ಮೂಡಬೇಕಾದರೆ ಸುಬ್ಬು ಹೊಲೆಯಾರ್ ಅವರ ಚಿಂತನೆಗಳ ಸ್ವರೂಪ ನನ್ನೊಳಗೆ ಹೊತ್ತಿಸಿದ ಸೂಕ್ಷ್ಮ ಸಂವೇದಿ ಚಿಂತನೆಗಳ ಕಿಡಿ. ಕವಿ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿ ಆತ ಪದ್ಯ ಬರೆಯಲೇ ಬೇಕು ಎಂದೇನಿಲ್ಲ ಬದಲಾಗಿ ಆತ ಪದ್ಯದ ರೀತಿ ಬದುಕಿದರೆ ಸಾಕು ಎನ್ನುವ ಮಾತಿಗೆ ಅನ್ವರ್ಥವಾಗಿ ಸುಬ್ಬಣ್ಣ ಬದುಕುತ್ತಿದ್ದಾರೆ.

‍ಲೇಖಕರು Admin

20 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading