– ಟಿ ಎಸ್ ಗೊರವರ
ಗದ್ದೆಯ ಬದುವಿನಲಿ
ಸ್ವಚ್ಛಂದ ಹಕ್ಕಿಯಂತೆ ಹಾರಾಡಿಕೊಂಡಿದ್ದವಳೇ
ತೆನೆಗಟ್ಟಿದ ಪ್ರೇಮವ ಬೊಗಸೆಗೆ ಸುರಿದು
ಜಗವ ಮರೆಸಿದೆ
ನಿನಗಾಗಿ ಜಗವ ಸುತ್ತಿದೆ
ಕಂಡ ದಾರಿಗಳಲಿ ಅಂಡಲೆದೆ
ನೀನಲ್ಲವಾಗಿ ಬೇಸರಿಸಿದೆ
ನಿಡುಸುಯ್ದೆ
ನೀನೋ ಲಹರಿಯಲಿ ಗಾಳಿಗೆ ಓಲಾಡುತ್ತಾ
ಓಲಾಟದಲೂ ಧ್ಯಾನ ಕದಡದ ಭತ್ತದಂತೆ ನಿಂತಿರುವೆ
ಎಲೆ ಮರೆಯ ಹಣ್ಣು ಸಿಕ್ಕಂತಾಗಿ
ಸ್ವರ್ಗಕ್ಕೆ ಏಣಿ ಹಾಕಿದ್ದೇನೆ
ಕೊನೆಗೂ ನಿನ್ನ ವಿಳಾಸ ಸಿಕ್ಕಿತು
ನೀ ಬರುವ ದಾರಿಯ ಕಿರು ತಿರುವಿನಲಿ ನಿಂತು
ಮುಗುಳ್ನಗೆ ಚೆಲ್ಲಿ ಕಾಯುತಿರುವೆ
ಅಂತೂ ಹುಡುಕಾಟ ಫಲಿಸಿದ್ದರ ಕುರಿತು ಬಾಳ ನವಿರಾಗಿ ಬರೆದಿದ್ದಿರಿ..
ವಿಳಾಸ ಸಿಕ್ಕಿದ ಮೇಲೆ ಇನ್ನೇಕೆ ತಡ ತಟ್ಟಿ ರುದಯದ ಬಾಗಿಲ
NIce sir
uttama kavana..
naviru bhavanegala sankula
ಗೊರವರವರೇ ಕವಿತೆ ಚೆನ್ನಾಗಿದೆ..
kavite tumba chennagide sir
Channagide sir..