ಅಕ್ಕ ಮಲ್ಲಿಕಾ ಮತ್ತು ಭಾವ ಡಾ. ಬಸವರಾಜು ತಮ್ಮ ಹೊಸಮನೆ ‘ಧರ್ಮ ಮೇಘ’ದ ಗೃಹ ಪ್ರವೇಶದ ಸಂದರ್ಭದಲ್ಲಿ’ಪುಸ್ತಕ ತಾಂಬೂಲ’ವಾಗಿ, ಮೌಖಿಕ ಪರಂಪರೆಯ ಗುರುಗಳೂ, ಸಿನಿಮಾ ನಿರ್ದೇಶಕರೂ, ಬೌದ್ಧ ವಿದ್ವಾಂಸರೂ ಆಗಿದ್ದ ಕೆ.ಎಂ.ಶಂಕರಪ್ಪನವರ ‘ ಬುದ್ದ ಬರಲಿ ನಮ್ಮೂರಿಗೆ’ ಪುಸ್ತಕ ನೀಡಿದರು; ಜಾಲಾರ ಪ್ರಕಾಶನ ಹುಟ್ಟು ಹಾಕಿದರು.
ನಮ್ಮ ಹಳ್ಳಿತೋಟದ ತೋತಾಪುರಿ ಮಾವು, ಪುಸ್ತಕದ ಜೊತೆಗೂಡಿ ತಾಂಬೂಲದ ಸೊಬಗನ್ನು ಇನ್ನಷ್ಟು ಹೆಚ್ಚಿಸಿತು.
ಗೃಹ ಪ್ರವೇಶ, ನಾಮಕರಣ, ಮದುವೆ ಮೊದಲಾದ ಸಂಭ್ರಮದ ಕ್ಷಣಗಳಿಗೆ ಇಂಥ ಅರ್ಥಪೂರ್ಣ ಉಡುಗೊರೆ ಜೊತೆಗಿರಲಿ. ಪ್ಲಾಸ್ಟಿಕ್ ಡಬ್ಬಿ, ಸ್ಟೀಲ್ ಪಾತ್ರೆ , ಕೆಜಿ ಲೆಕ್ಕದಲ್ಲಿ ತೂಗಿತರುವ ರವಿಕೆ ಕಣ ಮೂಲೆ ಸೇರಲಿ.
ಹೋಮ ಹವನಗಳಿಲ್ಲದೆ, ಹಳ್ಳಿಕಾರ್ ಹಸು ಮನೆ ತುಂಬಿ, ಬಂಧು ಮಿತ್ರರು ಹಾಡಿ, ಕುಣಿದು, ಹೋಳಿಗೆ ಊಟ ಚಪ್ಪರಿಸಿದ ಕ್ಷಣಗಳು ಗೃಹ ಪ್ರವೇಶದ ಸಂಭ್ರಮವನ್ನು ಹೆಚ್ಚಿಸಿದವು.
-ಜಿ ಕೃಷ್ಣಪ್ರಸಾದ್
0 ಪ್ರತಿಕ್ರಿಯೆಗಳು