ಗೃಹ ಪ್ರವೇಶಕ್ಕೆ ಪುಸ್ತಕ ತಾಂಬೂಲ

ಅಕ್ಕ ಮಲ್ಲಿಕಾ ಮತ್ತು ಭಾವ ಡಾ. ಬಸವರಾಜು ತಮ್ಮ ಹೊಸಮನೆ ‘ಧರ್ಮ ಮೇಘ’ದ ಗೃಹ ಪ್ರವೇಶದ ಸಂದರ್ಭದಲ್ಲಿ’ಪುಸ್ತಕ ತಾಂಬೂಲ’ವಾಗಿ, ಮೌಖಿಕ ಪರಂಪರೆಯ ಗುರುಗಳೂ, ಸಿನಿಮಾ ನಿರ್ದೇಶಕರೂ, ಬೌದ್ಧ ವಿದ್ವಾಂಸರೂ ಆಗಿದ್ದ ಕೆ.ಎಂ.ಶಂಕರಪ್ಪನವರ ‘ ಬುದ್ದ ಬರಲಿ ನಮ್ಮೂರಿಗೆ’ ಪುಸ್ತಕ ನೀಡಿದರು; ಜಾಲಾರ ಪ್ರಕಾಶನ ಹುಟ್ಟು ಹಾಕಿದರು.

ನಮ್ಮ ಹಳ್ಳಿತೋಟದ ತೋತಾಪುರಿ ಮಾವು, ಪುಸ್ತಕದ ಜೊತೆಗೂಡಿ ತಾಂಬೂಲದ ಸೊಬಗನ್ನು ಇನ್ನಷ್ಟು ಹೆಚ್ಚಿಸಿತು.

ಗೃಹ ಪ್ರವೇಶ, ನಾಮಕರಣ, ಮದುವೆ ಮೊದಲಾದ ಸಂಭ್ರಮದ ಕ್ಷಣಗಳಿಗೆ ಇಂಥ ಅರ್ಥಪೂರ್ಣ ಉಡುಗೊರೆ ಜೊತೆಗಿರಲಿ. ಪ್ಲಾಸ್ಟಿಕ್ ಡಬ್ಬಿ, ಸ್ಟೀಲ್ ಪಾತ್ರೆ , ಕೆಜಿ ಲೆಕ್ಕದಲ್ಲಿ ತೂಗಿತರುವ ರವಿಕೆ ಕಣ ಮೂಲೆ ಸೇರಲಿ.

ಹೋಮ ಹವನಗಳಿಲ್ಲದೆ, ಹಳ್ಳಿಕಾರ್ ಹಸು ಮನೆ ತುಂಬಿ, ಬಂಧು ಮಿತ್ರರು ಹಾಡಿ, ಕುಣಿದು, ಹೋಳಿಗೆ ಊಟ ಚಪ್ಪರಿಸಿದ ಕ್ಷಣಗಳು ಗೃಹ ಪ್ರವೇಶದ ಸಂಭ್ರಮವನ್ನು ಹೆಚ್ಚಿಸಿದವು.

-ಜಿ ಕೃಷ್ಣಪ್ರಸಾದ್

‍ಲೇಖಕರು avadhi

May 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: