ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುರುದತ್ತ್ ಕೈಗೆತ್ತಿಕೊ೦ಡ ವಿಷದ ಬಟ್ಟಲಿಗೆ ಒ೦ದು ಕ೦ಬನಿ

ಗುರು ದತ್ತ್: ಕೈಫಿ ಆಜ್ಮಿ

ಸದಾ ನೆಲೆಸಲು ಇಹ ಲೋಕಕ್ಕೆ ಯಾರೂ ಬರುವುದಿಲ್ಲ

ಆದರೂ ನೀ ತೆರಳಿದಂತೆ ಯಾರೂ ತೆರಳುವುದಿಲ್ಲ.

 

ಸಾವು ಕೂಡ ಹೆದರಿ ಕಂಪಿಸಿರಬೇಕು ಅರೆಕ್ಷಣ,

ಈ ಬಗೆಯಲಿ ಯಾರೂ ಸಾವನ್ನು ಆಲಿಂಗಿಸುವುದಿಲ್ಲ

 

ಸಮುದ್ರವೇ ಇಂಗಿಹೋಗಬಹುದು ಎಂಬ ಭಯ ಈಗ

ತನ್ನ ಅಸ್ಥಿಯ ತಾನೇ ಯಾರೂ ವಿಸರ್ಜಿಸುವುದಿಲ್ಲ

 

ಸಾಕಿಯ ಮೇಲೆ ಸಿಟ್ಟಿತ್ತೆ ಮಧುಶಾಲೆಯ ಬಗೆಗೆ ದೂರು?

ದಣಿವಾರಿಸಲು ಈ ರೀತಿ ಯಾರು ವಿಷ ಸೇವಿಸುವುದಿಲ್ಲ.

 

ಬೆಳಕಿನ ಕಿರಣಗಳು ನಿನ್ನ ಮೈ ಪರಚಿದವು, ಒಪ್ಪಿಕೊಂಡೆ

ಇರುಳು ಕಳೆಯದೆ ಯಾರೂ ದೀಪ ಆರಿಸುವುದಿಲ್ಲ.

 

– ಕೈಫಿ ಆಜ್ಮಿ

ಅನುವಾದ: ಸಂವರ್ತ ‘ಸಾಹಿಲ್’

 

(೧೯೬೪ ರಲ್ಲಿ ಖ್ಯಾತ ನಟ-ನಿರ್ದೇಶಕ ಗುರು ದತ್ತ್ ಆತ್ಮಹತ್ಯೆ ಮಾಡಿಕೊಂಡಾಗ ಬರೆದ ಗಜಲ್)

‍ಲೇಖಕರು G

30 December, 2011

4 Comments

  1. keshav

    Should have given link to the original !

  2. hemalata

    hrudaya toyduhoyitu.

  3. Dr. Sidram Karanik

    ಕೈಫಿ ಆಜ್ಮಿಯ ಅಂತ್ಯ ನಿಜವಾಗಿಯೂ ದುರಂತವೇ ಸರಿ. ಪುರೋಗಾಮಿ ಸಾಂಸ್ಕೃತಿಕ ಚಳುವಳಿಯ ಬಗೆಗಿನ ಅವರಲ್ಲಿ ಇದ್ದ ಕಳಕಳಿ ಇಂದು ಕಳೆದು ಹೋಗಿದೆ ಅಥವಾ ನಾವೇ ಕಳೆದುಕೊಂಡಿದ್ದೇವೆ. ಯಾಕಾದ್ರೂ ಹೀಗಾಗುತ್ತೋ ….. ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading