ಗಿರಿಧರ ಖಾಸನೀಸರ ಮೂರು ‘ಅಲೆಮಾರಿ’ ಕವಿತೆಗಳು

ಗಿರಿಧರ ಖಾಸನೀಸ

—-

ಮರುಭೂಮಿಯ ಮಧ್ಯದಲ್ಲಿ
ಒಂಟೆಯ ಮೇಲೆ ಒಂಟಿ ಸವಾರ. ಮಠ ಮಠ ಮಧ್ಯಾಹ್ನ.
ನೆತ್ತಿಯ ಮೇಲೆ ಸೂರ್ಯ.
ಮರಳು. ಬಿಸಿಗಾಳಿ. ಮರೀಚಿಕೆ.

ಮರಳಲ್ಲಿ ತೆವಳಿತೊಂದು ಮುದಿಹಾವು.
ಆಕಾಶದಲ್ಲಿ ತೇಲಾಡಿತೊಂದು ಹದ್ದು.

ಬಾಯಾರಿದ ಒಂಟೆ,
ಹಸಿದ ಹದ್ದು,
ದಣಿದ ಹಾವು.

ಕಲಾವಿದ ಕುಂಚವನ್ನು
ಕೆಳಗಿಟ್ಟು ಮೈಮುರಿದ.

ಹಾವು ಹೆಡೆ ಎತ್ತಿತು.
ಹದ್ದಿನ ಕಣ್ಣು ಚುರುಕಾಯಿತು.

{ }

ಇಬ್ಬರು ಪ್ರಯಾಣಿಕರು.
ನೆತ್ತಿಗೇರಿದ ಬಿಸಿಲು.
ಕುಂಟನ ಬೆನ್ನಿಗೆ ಕುರುಡ ಕೂತಿದ್ದಾನೆ.

ಸ್ವಲ್ಪ ಹೊತ್ತು ಸುಧಾರಿಸಿದರೆ ಹೇಗೆ
ಅಂದ ಕುರುಡ.

ಕುಂಟನಿಗೂ ಅದೇ ಬೇಕಿತ್ತು.
ನೆರಳಲ್ಲಿ ಕೂತು ಬುತ್ತಿಯನ್ನು ಬಿಚ್ಚಿದ.
ಕುರುಡನಿಗೆ ತಿನ್ನಿಸಿದ. ತಾನೂ ತಿಂದ.

ಪಕ್ಕದಲ್ಲೇ ಹರಿದ ನೀರಿನಲ್ಲಿ ಕಾಲನ್ನು ಆಡಿಸಿದ.
ಹಸಿದ ಮೊಸಳೆ ಅದನ್ನು ಕಚ್ಚಿಕೊಂಡು ಹೋಯಿತು.

ನಿದ್ದೆಯಿಂದ ಎದ್ದ ಕುರುಡ ಕುಂಟನಿಗಾಗಿ ಕಾದ.
ಅವನ ಹೆಸರು ಹಿಡಿದು ಕೂಗಿದ. ಉತ್ತರ ಬರಲಿಲ್ಲ.

ಮಾರನೇ ದಿನ ಕುರುಡ ಕಿವುಡನೊಬ್ಬನ ಕೈ ಹಿಡಿದ.
ಪ್ರಯಾಣ ಮುಂದುವರೆಸಿದ.

ಕಿವುಡನ ಕೈ ಸ್ಪರ್ಶ
ಕುರುಡನಿಗೆ ಹುಚ್ಚು ಹಿಡಿಸಿತು.

{ }


ರೈಲು ಅತಿವೇಗದಲ್ಲಿ ಚಲಿಸುತ್ತಿತ್ತು.
ಹೊದಿಕೆ ಸರಿಸಿ ಪ್ಯಾಂಟು ಕಳಚಿ
ಶೌಚಾಲಯಕ್ಕೆ ಹೋದೆ.

ವಾಪಸ್ ಬಂದಾಗ ನನ್ನ ಜಾಗದಲ್ಲಿ
ಬೇರೊಬ್ಬರು ಮಲಗಿದ್ದರು.

ಮೆಲ್ಲಗೆ ಹೊದಿಕೆ ಸರಿಸಿ ನೋಡಿದೆ.
ಆಶ್ಚರ್ಯವಾಯಿತು.

ನಿಂತವನು ನಾನೇ
ಮಲಗಿದವನೂ ನಾನೇ

ಹೋದವನೂ ನಾನೇ
ಬಂದವನೂ ನಾನೇ

ಹತ್ತಿದವನು ನಾನೇ
ಇಳಿಯುವವನೂ ನಾನೇ.

ಹಾಗಾದರೆ ಶೌಚಾಲಯದಲ್ಲಿ
ಬಿಟ್ಟು ಬಂದೆನಲ್ಲ
ಅವನಾರು?

‍ಲೇಖಕರು avadhi

December 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: