ಖಾದರ್ಮೊಹಿಯೊದ್ದೀನ್ ಕೆ ಎಸ್
ಪ್ರಕೃತಿ ಮಡಿಲಲ್ಲಿ
ಮರದ ನೆರಳಲ್ಲಿ
ಹೂ ಮನಸು ಅರಳಬೇಕು
ಜೀವ-ಭಾವಗಳು
ಒಂದಾಗಿ ಬೆರೆತು
ನಸು ನಗೆಯ ಸೂಸಬೇಕು
ಸ್ವರ-ರಾಗ-ತಾಳ
ಲಯ-ಭಾವ-ಮೇಳ
ಎದೆಯಲ್ಲಿ ಮಿಡಿಯಬೇಕು
ಚೆಂದುಟಿಯ ಚೆಲುವು
ಹೂವಾಗಿ ಬಿರಿದು
ಹಾಡೊಂದು ಜಿನುಗಬೇಕು
ಕನಸ ಕಣ್ಣೊಳಗೆ
ಮಿನುಗು ನಕ್ಷತ್ರ
ಹೊಳೆ ಹೊಳೆದು ಮಿನುಗಬೇಕು
ಬಾಳೊಂದು ಬಂಧ
ತೇಯ್ದಷ್ಟು ಗಂಧ
ಹೊಡ ಮರಳಿ ತೇಯಬೇಕು
ಬದುಕೊಂದು ಸಂತೆ
ಮರೆತೆಲ್ಲ ಚಿಂತೆ
ಪರಿಮಳವ ಸೂಸಬೇಕು
0 ಪ್ರತಿಕ್ರಿಯೆಗಳು