ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಎಸ್ ಎಸ್ ಕೆ ಕೊಪ್ಪ

-ಕೆ ಎಸ್ ಎಸ್ ಕೆ ಕೊಪ್ಪ

ಮರೆತ ಸಾಲು…..

ಜಂಜಾಟಗಳ ಮಧ್ಯೆ ಏಕೋ ಮರೆತಿದ್ದೆ,
ಮನಕೆ ಕೊಂಚ ಮುದ ನೀಡುವ
ನಾಲ್ಕು ಸಾಲುಗಳ ಗೀಚಲು….
ಗೀಚಿ ನಿರುಮ್ಮಳವಾಗಲು….

ಲೇಖನಿ ಅದೆಷ್ಟು ಚಡಪಡಿಸುತ್ತಿದೆಯೋ??
ಎಲ್ಲೋ ಅನಾಥವಾಗಿ ಬಿದ್ದಿರಬಹುದು….
ಬೇಸರದ ಕಣ್ಣೀರಿನಂತಾಗಿರಬಹುದು
ಅದರೊಳಗಿನ ನೀಲಿ ಶಾಯಿ!!

ಆ ನನ್ನ ಪುಸ್ತಕದ ಹಾಳೆಗಳು
ಉಸಿರು ಕಟ್ಟಿಕೊಂಡಂತಾಗಿ
ನನ್ನ ಮೇಲೆ ತೀವ್ರವಾಗಿ
ಕೋಪಗೊಂಡಿರಬಹುದು!!

ಈ ನಡುವೆ ನಾನೋ ಯಾವ
ಬೇಸರಕ್ಕೂ, ಯಾರ ಕೋಪಕ್ಕೂ
ಪ್ರತಿಕ್ರಿಯುಸವುದಕ್ಕೂ ಹೋಗದೇ
ಭಾವ ನಿರ್ಲಿಪ್ತನಾಗಿದ್ದೇನೆ……..

‍ಲೇಖಕರು Admin

25 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading