ಕೂಡಲೇ ಮನೆಯ ಹೆಂಚು ಸರಿ ಮಾಡಿಸಿದೆ..

hrudayashiva

ಹೃದಯ ಶಿವ

ಕೂಡಲೇ ಮನೆಯ ಹೆಂಚು ಸರಿ ಮಾಡಿಸಿದೆ,
ಮಳೆಗಾಲದಲ್ಲಿ ಮಗಳು
ನೆಮ್ಮದಿಯಿಂದ ನಿದ್ರಿಸಬಹುದು.

ಈಗಲೇ ಈ ಬಾಗಿಲ ಕಿತ್ತು ಹೊಸ ಹಲಗೆ ಜೋಡಿಸಿ
ಗಟ್ಟಿ ಚಿಲಕ ಮಾಡಿಸಿಬಿಡುತ್ತೇನೆ,
ಒಡವೆಗಳ ಮಾತು ಬಿಡಿ,
ಪುಸ್ತಕಗಳಾದರೂ ಉಳಿದುಕೊಳ್ಳಲಿ
ಮೊಮ್ಮಕ್ಕಳಿಗೆ ತಾತನಾಸ್ತಿಯ ರೂಪದಲ್ಲಿ
ಕಳ್ಳಕಾಕರಿಂದ ಪಾರಾಗಿ.

ಇಲ್ಲೊಂದು ಕಿಟಕಿ ಇದೆಯಲ್ಲ,
ಇದರ ಸರಳುಗಳ ನಡುವೆಯೇ ಕಾರ್ಖಾನೆಯುಗುಳುವ
ಗಬ್ಬು ವಾಸನೆ
ಕೋಣೆಗೆ ನುಗ್ಗುತ್ತಿದೆ ಇತ್ತೀಚೆಗೆ…
ಇಗೋ ಮುಚ್ಚಿಯೇ ಬಿಟ್ಟೆ,
ಈ ಕಿಟಕಿ ಇತ್ತೆಂಬುದಕ್ಕೆ ಸಾಕ್ಷ್ಯಗಳೇ ಇಲ್ಲ-
ಇನ್ನು ನಿರಾತಂಕ ವಿಶ್ರಾಂತಿ ಅಪ್ಪನಿಗೆ.

ಚಕ್ಕೆಗಳಾಗಿ ಉದುರಿಹೋಗುವ ಮುನ್ನ
ಈ ಗೋಡೆಗಳಿಗಿನ್ನಾದರೂ
ಸುಣ್ಣ ಹೊಡೆಸಿಬಿಡಬೇಕು, ಇಲ್ಲವೇ ಬಣ್ಣ-
ಹಬ್ಬ ಈಗಲೇ ಈ ಕ್ಷಣವೇ ಆಗ

ಈಗ ಮನೆಗೊಂದು ಕಳೆ,
ನೆಮ್ಮದಿ.
ಉಫ್ !
ರಿಮೋಟಿನೊಳಗಿನ ಜಿರಳೆ ಮರಿ ಕೊಡವಿ
ಟಿವಿ ಮುಂದೆ ಕೂತೆ,
ಹಾಡು ಪ್ರಾಸಾರವಾಗುತ್ತಿತ್ತು :

“ನೀ ಲೋಕದ ಕಾಳಜಿ ಮಾಡಬೇಕಂತಿ
ಯಾರ ಬ್ಯಾಡ ಅಂತರ ಮಾಡಪ್ಪ ಚಿಂತಿ”

‍ಲೇಖಕರು Admin

February 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಋತಊಷ್ಮ

    ಕವನ ಹೃದಯಕೆ ಮುಟ್ಟಿತು. ಖುಷಿ ಆಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: