ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಮೇ ತಿಂಗಳ 28 ಮತ್ತು 29ರ ಶನಿವಾರ, ಭಾನುವಾರಗಳಂದು ಸಂಜೆ 6.30ಕ್ಕೆ ಮೈಸೂರಿನ ಕಲಾಮಂದಿರದಲ್ಲಿರುವ ಕಿರುರಂಗಮಂದಿರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕಂತ ಗಿರೀಶ ಕಾರ್ನಾಡರ ಶ್ರೇಷ್ಠ ನಾಟಕ `ತುಘಲಕ್’ ಪ್ರದರ್ಶನಗೊಳ್ಳಲಿದೆ. ರಂಗಾಯಣದ ಹಿರಿಯ ಕಲಾವಿದ ಶ್ರೀ ಮಾಯಸಂದ್ರ ಕೃಷ್ಣಪ್ರಸಾದ್ ಈ ನಾಟಕವನ್ನು ನಿರ್ದೇಶಿಸಿರುತ್ತಾರೆ.
ಎರಡು ದಿನಗಳ ಕಾಲ ಪ್ರದರ್ಶನವಾಗಲಿರುವ ನಾಟಕ ಪ್ರದರ್ಶನ ಕುರಿತು ತಮ್ಮ ಮಾಧ್ಯಮಗಳ ಮುಖಾಂತರ ಮೈಸೂರಿನ ರಂಗಾಸಕ್ತರಿಗೆ ಮಾಹಿತಿಯನ್ನು ತಲುಪಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ. ತುಘಲಕ್ ನಾಟಕ ಕುರಿತ ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಈ ಮೇಲ್ ಮೂಲಕ ತಮಗೆ ಕಳುಹಿಸಿಕೊಡುತ್ತೇವೆ.
0 ಪ್ರತಿಕ್ರಿಯೆಗಳು