ನಾನು ಅವನು
ರೇಖಾ ಭಟ್ ಹೊನ್ನಗದ್ದೆ
ಒಣಗಿ ನಿಂತಿದ್ದೇನೆ ಎಂದೆ
ಆತ ಬಿಸಿಯುಸಿರು ಚೆಲ್ಲಿದ
ಬಯಕೆ ಕೊಂಬೆ ತುಂಬೆಲ್ಲ
ಹೂ ಚಿಗುರು
ತರೆಗೆಲೆಗಳ ಮೇಲೆ ತಿರುಗಾಡಿ
ಬೇಸರ ಎಂದೆ
ಪಾದಗಳಿಗೆ ತುಟಿಯೊತ್ತಿದ
ಕನಸ ಹಾದಿ ತುಂಬಾ ಹಸುರ ಹಾಸು
ನನಗೆ ತೀರದ ದಾಹ ಎಂದೆ
ಆತ ನೆತ್ತಿ ಚುಂಬಿಸಿದ
ಹೃದಯದಲಿ ಹುಟ್ಟಿತೊಂದು
ಸಿಹಿ ಕಡಲು
ನನಗೆ ಭಯ ಎಂದೆ
ಕಿರುಬೆರಳ ಹಿಡಿದು ನಡೆದ
ಎದುರಾದವರು ಹಾರೈಸಿದರು
ನನಗೆ ಇನ್ನೇನೊ ಬೇಕು ಅಂದೆ
ಆತ ನನ್ನ ನನಗೆ ನೀಡಿದ
ಅಂದಿನಿಂದ ನಾನು
ಅವನಿಗಾಗಿ ಬದುಕಿದೆ
ಚೆಂದ ಕವಿತೆ…
ಚನ್ನಾಗಿದೆ
chennagide….