ಕಾರುಣ್ಯದ ಮಳೆ…

ತೇಜಾವತಿ ಎಚ್ ಡಿ

ಅಸೂಯೆ ದ್ವೇಷದ ಕಿಡಿಯೊಂದು
ಸಾವಿರ ಕುಡಿಗಳಿಗೆ ಜನ್ಮನೀಡಿದೆ
ಎಲ್ಲವಕ್ಕೂ ಬೆಳೆದು ಹೆಮ್ಮರವಾಗುವ ಹಂಬಲ
ಮುಖವಾಡದೊಳಗಿನ ಕರಾಳ ನರ್ತನಕ್ಕೆ
ತಾಯಿ ಬೇರು ಕೃಶವಾಗಿ
ಕುಸಿದು ಬೀಳುತ್ತಿರುವ ಸಾಮ್ರಾಜ್ಯವ ಕಂಡು
ಸಮೃದ್ಧವಾಗಿದ್ದ ರೆಂಬೆ ಕೊಂಬೆ ಹಕ್ಕಿ -ಗೂಡು
ಹಸಿರು ಹೂ ಹಣ್ಣುಗಳ ನೆನೆದು
ಭೂದೇವಿಗೆ ಮೊರೆಯಿಡುತ್ತಿದೆ

ಫಕೀರನ ಸತ್ಯ ಅಹಿಂಸೆಯ ಬೀಜ ಬಿತ್ತಿ
ಬುದ್ಧನ ಕಾರುಣ್ಯದ ಮಳೆ ಸುರಿದು
ಗತಿಸಿದ ಕುರು ಸಾಮ್ರಾಜ್ಯದ ಕುರುಹಿಲ್ಲದಂತೆ
ನಂದನವನವಾಗಲಿ ಈ ನಾಡು
ಮುರುಳಿಯ ಗಾನಕ್ಕೆ ತರುಲತೆಗಳು ತಲೆದೂಗಿ
ಹಕ್ಕಿಪಿಕ್ಕಿಗಳು ಉಲಿದು ಝರಿ ತೊರೆಗಳು ನರ್ತಿಸಲಿ

ಮಹತ್ತಿಗಾಗಿ ಸಂದ ಬಲಿದಾನಗಳು ಮುಕ್ತಿ ಕಂಡು ಹಾರವಾದ ಜಲ ಮೂಲಗಳು ಶುದ್ಧಗೊಂಡು
ಬಳಲಿದವರ ದಣಿವು ತಣಿದು
ಏರಿಗಳ ಮೇಲೆ ನಿಂತು
ಒಬ್ಬಂಟಿಯಾಗಿ ರೋಧಿಸುತ್ತಿರುವ
ವೀರಗಲ್ಲು ಮಹಾಸತಿಗಲ್ಲುಗಳ ಮೇಲೆ
ಚರಿತ್ರೆಯ ಬೆಳಕು ಹರಿದು
ಸ್ಪರ್ಶಿಸುವ ತೃಣಕಣಕ್ಕೂ
ಅಭಿಮಾನದ ಹೊಳೆ ಹರಿಯಲಿ

‍ಲೇಖಕರು Admin

May 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: