ಕವಿತೆ
ಜಯಶ್ರೀ ಬಿ ಕದ್ರಿ
ಕವಿತೆಯೆಂದರೆ ಹಾಗೆ
ಅಗಾಗ ಪಳ್ಳೆಂದು
ನಗುವ ಹೂವು
ಕವಿತೆಯೆಂದರೆ
ತಂತಿ ಕಂಪಿಸಿದ
ಮೌನ
ಕೋಲ್ಮಿಂಚು ಸುಳಿದಂತೆ
ಗುಡುಗು ಕಣ್ಣೀರು
ಕವಿತೆಯೆಂದರೆ ಮತ್ತೆ
ಮೌನಕೂ ಮಾತಿಗೂ
ಚೇತನವು
ಬೆಸೆವ
ಕೊಂಡಿ
ಕವಿತೆಯೆಂದರೆ ಹಾಗೆ
ನಿಶ್ಶಬ್ದಕೂ ಧ್ವನಿ ತುಂಬಿ
ಭೋರ್ಗರೆಯುವ
ಕಡಲು.
ಕವಿತೆಯೆಂದರೆ ಮತ್ತೆ
ಭವದ ಸಾಯುಜ್ಯಕ್ಕೆ
ಉರಿವ
ಹಣತೆ
tumba chennaagide..
Thank you Madam
ಪದ್ಯ ಚೆನ್ನಾಗಿದೆ. ಬಿ.ಆರ್.ಎಲ್ ರವರ ‘ಪ್ರೀತಿಯೆಂದರೆ’ ನೆನಪಿಗೆ ಬಂತು.
Kavite endare heege manadinda manake hariva sarite
Thank you Madam
‘ಭವದ ಸಾಯುಜ್ಯಕ್ಕೆ ಉರಿವ ಹಣತೆ’ — ತುಂಬಾ ಇಷ್ಟವಾದ ಸಾಲು
ಕವಿತೆ ಉತ್ತಮವಾಗಿದೆ.