'ಕವಿತೆಯೆಂದರೆ ತಂತಿ ಕಂಪಿಸಿದ ಮೌನ' – ಜಯಶ್ರೀ

ಕವಿತೆ

ಜಯಶ್ರೀ ಬಿ ಕದ್ರಿ

ಕವಿತೆಯೆಂದರೆ ಹಾಗೆ
ಅಗಾಗ ಪಳ್ಳೆಂದು
ನಗುವ ಹೂವು
 
ಕವಿತೆಯೆಂದರೆ
ತಂತಿ ಕಂಪಿಸಿದ
ಮೌನ
ಕೋಲ್ಮಿಂಚು ಸುಳಿದಂತೆ
ಗುಡುಗು ಕಣ್ಣೀರು

ಕವಿತೆಯೆಂದರೆ ಮತ್ತೆ
ಮೌನಕೂ ಮಾತಿಗೂ
ಚೇತನವು
ಬೆಸೆವ
ಕೊಂಡಿ
 
ಕವಿತೆಯೆಂದರೆ ಹಾಗೆ
ನಿಶ್ಶಬ್ದಕೂ ಧ್ವನಿ ತುಂಬಿ
ಭೋರ್ಗರೆಯುವ
ಕಡಲು.
 
ಕವಿತೆಯೆಂದರೆ ಮತ್ತೆ
ಭವದ ಸಾಯುಜ್ಯಕ್ಕೆ
ಉರಿವ
ಹಣತೆ
 

‍ಲೇಖಕರು G

October 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ. ಬಿ.ಆರ್.ಎಲ್ ರವರ ‘ಪ್ರೀತಿಯೆಂದರೆ’ ನೆನಪಿಗೆ ಬಂತು.

    ಪ್ರತಿಕ್ರಿಯೆ
  2. Anil Talikoti

    ‘ಭವದ ಸಾಯುಜ್ಯಕ್ಕೆ ಉರಿವ ಹಣತೆ’ — ತುಂಬಾ ಇಷ್ಟವಾದ ಸಾಲು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: