ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಳೆದ ಕೀಲಿ ಕೈ ಸಿಕ್ಕಿದೆ, ಬೀಗಕ್ಕೆ ಬಾಯಿಲ್ಲ..

ಮರೆತವರ ನೆನಪಿಗೆ

ರೇಣುಕಾ ರಮಾನಂದ

ತುಕ್ಕು
ಕಬ್ಬಿಣಕ್ಕೆ…
ಹಸಿರಿಗಲ್ಲ.

ಬಿಡದೆ
ಹೊಯ್ದ ಮಳೆಗೆ
ಒಂದು ಹುಟ್ಟಿತು
ಇನ್ನೊಂದು ಸತ್ತಿತು.

13533130_1059078750845248_1945511311663637231_nಕಳೆದ ಕೀಲಿ ಕೈ ಸಿಕ್ಕಿದೆ
ತೆರೆಯೋಣವೆಂದರೆ
ಬೀಗಕ್ಕೆ ಬಾಯಿಲ್ಲ
ಬರೀ ಹಸಿರು.

‘ಮರೆತವರ ನೆನಪಿಗೆ
ಒಂದೆರಡು ಹಸಿರುಟ್ಟಿಸುವುದು
ನನ್ನ ಧಮ೯’
ರಸ್ತೆಯಲಿ ಸಿಕ್ಕಿ
ನಕ್ಕ ಮಳೆರಾಯ.

ಹೊರಳಿ ಹೋಗಬೇಕು
ಮರಳಿಬಾರದೆ
ಈ ಹಿಂದಿನಂತೆ
ಎಂದುಕೊಂಡೆ
ಜಗ್ಗಿ ನಿಲ್ಲಿಸಿತು
ಹಸಿರ ಮೊರೆತ.

ಹತ್ಯಾರದೊಡನೆ
ಹಾಜರಿ ಹಾಕಿದ
ಗುಜರಿ ಹುಡುಗನಿಗೂ
ಗರಗಸವಿಡಲು
ಬಿಲ್ಕುಲ್ ಇಷ್ಟವಿಲ್ಲ
‘ಈ ಮಳೆಗಾಲ ಕಳೆಯಲಿ ಸಾರ್’
ಎನ್ನುತ್ತಿದ್ದಾನೆ
‘ಹುಟ್ಟು ನಿನ್ನಿಂದಲ್ಲ ಮಳೆರಾಯನಿಂದ
ಸಾವು ಮಾತ್ರ ನಿನ್ನದು’
ಎಂದೇನಾದರೂ
ಅಪರೋಕ್ಷವಾಗಿ
ಅಂದನೇ….

ಬೀಜಗಳೇನು ಬಾನಿನುಂದುದುರಿದವೇ…
ಎಂದು ಕೇಳಿದೆ ಮೊಳಕೆಯನ್ನು…
ಹೋಗುವಾಗ ಬೀಗದ ಬಾಯಿಗೆ
ಮಣ್ಣು ತುಂಬಿದ್ದೆಯಾ
ಹೊರಳಿ ಕೇಳಿತು
ನನ್ನನ್ನೇ…

ಗೋರಿಗಳ ಮೇಲೆ
ಆಲಗಳರಳಿದ್ದು ನೋಡಿದ್ದೆ
ತುಕ್ಕೂ ಹಸಿರ ಹೆರಬಲ್ಲುದೆಂದು
ಈಗಷ್ಟೆ ತಿಳಿಯಿತು.

‍ಲೇಖಕರು admin

14 August, 2016

8 Comments

  1. smitha

    Chendada kavithe. Thattithu-smitha

    • Renuka ramananda

      Thank u very much

  2. kusuma patel

    very nice. idu jadatvadinda jeevakke—-

    • Renuka ramananda

      Thank u

  3. lalitha sid

    ಫೈನ್ ರೇಣುಕಾ,,, ಹೊಸ ಕಲ್ಪನೆ.

    • Renuka ramananda

      ಅಕ್ಕಾ ಖುಷಿ

  4. Sangeeta Kalmane

    ಆಸರೆ ಕೊಂಚ
    ಸಿಕ್ಕರೆ ಸಾಕು
    ನಾ ಅಲ್ಲೆ ಮೊಳೆತು
    ಗಿಡವಾಗುವೆ
    ನಿನ್ನ ಋಣ
    ತೀರಿಸುವೆ
    ನಾ ಹಾಕಿದೆ
    ನೀರೆಲ್ಲ ಪೋಲಾಯಿತು
    ಒಂದಿನಿತೂ ನೀ ಮರುಗದಿರು
    ತಿಂಗಳ ಬಿಲ್ಲು ಬಂದಾಗ
    ನಿಮ್ಮಂತೆ ನಾವಲ್ಲವೆ
    ಕೆಲವು ಬಂಜರಾದರೆ
    ಹಲವು ಚಿಗುರಿ
    ಮೊಗ್ಗಾಗಿ ಅರಳಿ ಹೂ
    ಕಾಯಿ ಹಣ್ಣು
    ಕೊಟ್ಟು
    ತೀರಿಸಿಬಿಡುವೆವು
    ಬಿಲ್ಲು ಕಟ್ಟಿದ
    ಹಣವನ್ನು
    ಮಾನವಾ
    ದಯವಿಟ್ಟು ನಮ್ಮ
    ಸಾಯಲು ಬಿಡಬೇಡ
    ತೊಳೆದ
    ನೀರಾದರೂ ಸರಿ
    ಬಳಿದ
    ನೀರಾದರೂ ಸರಿ
    ಕುಡಿದು
    ಬದುಕುವೆವು
    ನಾವೂ
    ನಿಮ್ಮೊಂದಿಗೆ
    ಕರುಣೆ ತೋರು
    ಆದರೆ ನೆನಪಿರಲಿ
    ನಾವೆಂದೂ
    ಸ್ವಾಥಿ೯ಗಳಲ್ಲವೆ ಅಲ್ಲ
    ಅದು ನಮ್ಮ
    ಕನಸಲ್ಲೂ ಇಲ್ಲ
    ಕಂಡಲ್ಲಿ ಹಾಕು
    ಒಂದಷ್ಟು ನೀರು!

    • Renuka ramananda

      Oh…nice mam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading